
ಪ್ಲವ ಸಂ|ರದ ವೃಷಭ ಮಾಸ ದಿನ 3 ಸಲುವ ವೈಶಾಖ ಶುದ್ಧ ಪಂಚಮಿ 13|| ಗಳಿಗೆದಿನ ವಿಶೇಷ :ಶ್ರೀ ಶಂಕರ ಜಯಂತಿ, ಕನ್ನರ್ಪಾಡಿ, ಕಾರ್ಕಳ, ಪಡುಬಿದ್ರಿ, ಗುರುಪುರ ರಥ ನಿತ್ಯ ನಕ್ಷತ್ರ :ಆರ್ದ್ರಾ 18 ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.48 ಗಂಟೆ ಸೂರ್ಯೋದಯ :6.06 ಗಂಟೆ
ಮೇಷ
ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಬಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ.
ವೃಷಭ
ಬಹುದಿನಗಳಿಂದ ಬಾಕಿ ಇರುವ ಹಣವು ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಸಹಧರ್ಮಿಣಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ.
ಮಿಥುನ
ಸಹೋದ್ಯೋಗಿಗಳಿಂದ ಸಕಾರಾತ್ಮಕ ಸಹಾಯ ದೊರಕಲಿದೆ. ಸಮಾಜದಲ್ಲಿ ನಿಮ್ಮ ಪರಿಶ್ರಮದ ಫಲವನ್ನು ಬೇರೆಯವರು ಸವಿಯುವ ಸಾಧ್ಯತೆ. ದೇವರ ಆರಾಧನೆ ಮಾಡಿ.
ಕಟಕ
ಆರ್ಥಿಕ ಸಮತೋಲನ ಕಂಡುಬರುವುದು. ನಿಮ್ಮ ಮೇಲಿನ ಆಪಾದನೆಗಳಿಂದ ಮುಕ್ತರಾಗಿ ಗೌರವಕ್ಕೆ ಪಾತ್ರರಾಗಲಿದ್ದೀರಿ. ದೇವೀ ಸನ್ನಿಧಿಯಲ್ಲಿ ತುಪ್ಪದ ದೀಪ ಹಚ್ಚಿ.
ಸಿಂಹ
ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಅತಿಯಾದ ಮಾತಿನಿಂದಾಗಿ ವೃಥಾ ವೈಮನಸ್ಸು. ಶಾರದೆಯ ಆರಾಧನೆ ಯಶಸ್ಸನ್ನು ನೀಡುವುದು.
ಕನ್ಯಾ
ವಿಪರೀತ ಕಾರ್ಯಬಾಹುಳ್ಯದಿಂದಾಗಿ ಬೇಸರ. ಸಮಾಧಾನದಿಂದ ವರ್ತಿಸುವುದು ಉತ್ತಮ. ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ಮನಸ್ಸಿಗೆ ನಿರಾಳವಾಗಿ ನೆಮ್ಮದಿ ದೊರಕಲಿದೆ.
ತುಲಾ
ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ. ತಜ್ಞರಿಂದ ಸೂಕ್ತ ಸಲಹೆ, ಸಹಾಯ ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಸುಖಾನುಭವ. ಯೋಜನೆಗಳು ಫಲಪ್ರದವಾಗುವವು.
ವೃಶ್ಚಿಕ
ಬೇರೆಯವರ ವ್ಯವಹಾರದಿಂದ ಮೋಸಹೋಗುವ ಸಾಧ್ಯತೆ. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಸಮಾಧಾನದಿಂದ ಮುಂದುವರೆಯುವುದು ಸೂಕ್ತ.
ಧನು
ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸಮಯವಾಗಿದೆ. ನಿಮ್ಮ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದು ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಕರ
ವಾಹನ, ಆಸ್ತಿ ಖರೀದಿಯ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ದೊರೆಯಲಿದೆ. ಬಹುದಿನಗಳ ಬಯಕೆ ಈಡೇರುವ ಸಾಧ್ಯತೆ. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ದೂರದ ಪ್ರಯಾಣದ ಸಾಧ್ಯತೆ.
ಕುಂಭ
ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಲಿದೆ. ಅಲಂಕಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕುಟುಂಬಕ್ಕೊಂದು ವಿಶೇಷ ಗೌರವ ತಂದುಕೊಡಲಿದ್ದಾರೆ.
ಮೀನ
ಕುಟುಂಬದವರೊಡನೆ ಧಾರ್ಮಿಕ ಕ್ಷೇತ್ರ ದರ್ಶನ ಲಭ್ಯವಾಗಲಿದೆ. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗುವ ಕಾಲ. ಗೃಹ ನಿರ್ಮಾಣ ಯೋಜನೆ ಸಿದ್ಧವಾಗುವ ಸಾಧ್ಯತೆ.