
ಪ್ಲವ ಸಂ|ರದ ವೃಷಭ ಮಾಸ ದಿನ 2 ಸಲುವ ವೈಶಾಖ ಶುದ್ಧ ಚೌತಿ 9||| ಗಳಿಗೆ ದಿನ ವಿಶೇಷ :ಶ್ರೀ ರಾಮಾನುಜ ಜಯಂತಿ ನಿತ್ಯ ನಕ್ಷತ್ರ :ಆರ್ದ್ರಾ 12||| ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.47 ಗಂಟೆ ಸೂರ್ಯೋದಯ :6.06 ಗಂಟೆ
ಮೇಷ
ವೃತ್ತಿ ಬದುಕಿನಲ್ಲಿ ಬದಲಾವಣೆ ಬಯಸುವವರಿಗೆ ಅತ್ಯಂತ ಪ್ರಶಸ್ತವಾದ ಸಮಯ. ಅನಿರೀಕ್ಷಿತ ಅವಕಾಶಗಳು ಒದಗಿಬರುವ ಸಾಧ್ಯತೆ ಕಂಡುಬರುತ್ತಿದೆ.
ವೃಷಭ
ನಿಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಅಭೂತಪೂರ್ವ ಸ್ಪರ್ಧೆಗಳನ್ನು ಎದುರಿಸುವಿರಿ. ಉನ್ನತಿ ನಿಮ್ಮ ಪಾಲಿಗೆ ಒದಗಿಬರಲಿದೆ. ಉತ್ತಮ ಕಾಲ ಸನ್ನಿಹಿತವಾಗಿದೆ.
ಮಿಥುನ
ನಿಮ್ಮ ಕಾರ್ಯಾನುಭವ ಮತ್ತು ಕ್ಷಮತೆಯಿಂದಾಗಿ ಉತ್ತಮ ಅವಕಾಶಗಳು ಒದಗಿಬರುವುದು. ಸಾಧಕ ಬಾಧಕಗಳನ್ನು ತೂಗಿ ನೋಡುವುದು ಉತ್ತಮ. ಮಗನಿಂದ ಶುಭ ವಾರ್ತೆ ಕೇಳುವಿರಿ.
ಕಟಕ
ನಿಮ್ಮ ಒಳ್ಳೆಯ ಕನಸುಗಳಿಗೆ ರೆಕ್ಕೆ ಪುಕ್ಕಗಳು ಮೂಡುವ ಸಾಧ್ಯತೆ ಕಂಡು ಬರುತ್ತಿದೆ. ಮನೆ ನಿರ್ಮಾಣ, ಆಸ್ತಿ ಖರೀದಿ ಮುಂದಾದವುಗಳು ಕೂಡಿಬರುವ ಸಾಧ್ಯತೆ. ಗಣಪತಿಯ ಆರಾಧನೆ ಉತ್ತಮ.
ಸಿಂಹ
ನಿಮ್ಮ ನಡೆ ನುಡಿಗಳಿಂದ ಉತ್ತಮ ಗೌರವ ಸಂಪಾದಿಸುವಿರಿ. ಬೇರೆಯವರ ಸಲಹೆಗಳನ್ನು ಕಡೆಗಣಿಸದಿರುವುದು ಒಳ್ಳೆಯದು. ಉತ್ತಮ ಯೋಜನೆಗಳನ್ನು ಕೈಗೊಳ್ಳಲು ಸಕಾಲ.
ಕನ್ಯಾ
ಕೆಲಸ ಕಾರ್ಯಗಳಲ್ಲಿ ಆತುರತೆ ಬೇಡ. ಸಮಾಧಾನದಿಂದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಸ್ಥಿರ ಸಂಪನ್ಮೂಲಗಳನ್ನು ಕಂಡುಕೊಳ್ಳುವಿರಿ. ಗುರುವಿನ ಆರಾಧನೆ ಶ್ರೇಯಸ್ಕರ
ತುಲಾ
ಹಿಂದಿನ ಉದ್ಯೋಗದಾತರಿಂದ ಅನಿರೀಕ್ಷಿತ ಕರೆಯ ಸಂಭವ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಬಂಧವನ್ನು ಹೊಂದುವಿರಿ. ದಿನದ ಅಂತ್ಯದಲ್ಲಿ ಸಹೋದ್ಯೋಗಿಗಳೊಂದಿಗೆ ಔತಣ ಕೂಟದ ಸಂಭವ.
ವೃಶ್ಚಿಕ
ಒತ್ತಡದ ಜೀವನದಿಂದ ಹೊರ ಬಂದು ಉತ್ಸಾಹದಿಂದ ಇರುವಿರಿ. ಸ್ನೇಹಿತರ ಅನಿರೀಕ್ಷಿತ ಆಗಮನದಿಂದ ಮನಸ್ಸಿಗೆ ನೆಮ್ಮದಿ. ಮನೆಯಲ್ಲಿ ಹಿತಕರ ವಾತಾವರಣ ನೆಲೆಸುವುದು.
ಧನು
ಅತ್ಯಪೂರ್ವ ಕ್ಷಣವೊಂದು ನಿಮಗೆ ಒದಗಿ ಬರಲಿದೆ. ಕುಟುಂಬದ ಸದಸ್ಯರೊಂದಿಗೆ ಅಪರೂಪದ ಹಿಂದಿನ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕ್ಷೇತ್ರ ದರ್ಶನದ ಭಾಗ್ಯ.
ಮಕರ
ವಿಪರೀತ ಕೆಲಸದ ನಡುವೆಯೂ ಮಾನಸಿಕ ಸ್ಥಿಮಿತ ನಿಮ್ಮದಾಗಲಿದೆ. ಸಹವರ್ತಿಗಳಲ್ಲಿ ಉತ್ಸಾಹ, ಹುರುಪು ತುಂಬುವಿರಿ. ದಿನದಂತ್ಯದಲ್ಲಿ ವಿಪರೀತ ದಣಿವು ಅರಿವಿಗೆ ಬರಲಿದೆ.
ಕುಂಭ
ಸಂಗಾತಿಯ ಸಮೀಪವೇ ಇದ್ದು ಮನದ ಆಸೆಯನ್ನು ಪೂರೈಸಿ. ನಿಮ್ಮ ಇಷ್ಟಕ್ಕೆ ಉತ್ತಮ ಸಹಕಾರ ದೊರೆಯಲಿದೆ. ನೆಮ್ಮದಿಯ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಪಕ್ಷಿಗಳಿಗೆ ಕಾಳುಗಳನ್ನು ನೀಡಿ.
ಮೀನ
ಕಾರ್ಯಕ್ಷೇತ್ರದಲ್ಲಿ ಹಿರಿಯ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಂದ ಉತ್ತಮ ಸಹಕಾರ ದೊರೆಯಲಿದೆ. ಹಿರಿಯರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ನಿಮ್ಮದಾಗಲಿದೆ.