
ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ ,ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ ,”ತೃತಿಯ/ಚತುರ್ಥಿ”
ಶನಿವಾರ, “ಮೃಗಶಿರ ನಕ್ಷತ್ರ /ಆರಿದ್ರಾ ನಕ್ಷತ್ರ”
ರಾಹುಕಾಲ 09: 10 ರಿಂದ 10:45
ಗುಳಿಕಕಾಲ 05:59 ರಿಂದ 07:35
ಯಮಗಂಡಕಾಲ 01:55 3:30
ಮೇಷ
ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.
ವೃಷಭ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ರಕ್ತ ಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.
ಮಿಥುನ
ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ.
ಕಟಕ
ಬಹುದಿನಗಳ ವೃತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ನಿವೃತ್ತರಿಗೆ ಪುಣ್ಯ ಕ್ಷೇತ್ರ ದರ್ಶನ ಸಾಧ್ಯತೆ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ.
ಸಿಂಹ
ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.
ಕನ್ಯಾ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚನೆ ಬೇಡ. ಆತುರದ ನಿರ್ಧಾರ ಸಲ್ಲದು. ಆಂಜನೇಯನ ದರ್ಶನ ಮಾಡಿ.
ತುಲಾ
ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿಯು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಈ ದಿನವನ್ನು ಖುಷಿಯಾಗಿ ಕಳೆಯಲು ಸ್ನೇಹಿತರು ಜೊತೆಯಲ್ಲಿರುತ್ತಾರೆ.
ವೃಶ್ಚಿಕ
ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವ.
ಧನು
ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು ದೊರೆಯಲಿದೆ. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಪ್ರಗತಿ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.
ಮಕರ
ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.
ಕುಂಭ
ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ರಾಜಕೀಯದಲ್ಲಿ ಅತಂತ್ರ ಸ್ಥಿತಿ. ಮಾನಸಿಕ ಚಂಚಲತೆ ಕಂಡುಬರುವುದು.
ಮೀನ
ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.