Design a site like this with WordPress.com
Get started

ಮೇ 14, ಶುಕ್ರವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತೃತಿಯ,
ಶುಕ್ರವಾರ, ‘ಮೃಗಶಿರಾ ನಕ್ಷತ್ರ’.
ರಾಹುಕಾಲ: 10 45 ರಿಂದ 12 20
ಗುಳಿಕಕಾಲ: 7:35 ರಿಂದ 9: 10
ಯಮಗಂಡಕಾಲ: 3.30 ರಿಂದ 05:05

ಮೇಷ

ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.

ವೃಷಭ

ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ. ‌

ಮಿಥುನ

ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವವನ್ನು ಹೊಂದಲಿದ್ದೀರಿ.

ಕಟಕ

ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನವಾಗಲಿದೆ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಸಿಂಹ

ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.

ಕನ್ಯಾ

ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ರಕ್ತ ಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.

ತುಲಾ

ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.

ವೃಶ್ಚಿಕ

ಬಹುದಿನಗಳ ವೃತ್ತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ. ದಿನದ ಕೊನೆಯಲ್ಲಿ ಶುಭ ಸೂಚನೆ.

ಧನು

ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ರಾಜಕೀಯದಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾದೀತು. ಮಾನಸಿಕ ಚಂಚಲತೆ.

ಮಕರ

ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಧೃತಿಗೆಡಬೇಕಾದ ಅಗತ್ಯವಿಲ್ಲ. ಈ ದಿನವನ್ನು ಖುಷಿಯಾಗಿ ಕಳೆಯಲು ಸ್ನೇಹಿತರು ಜೊತೆಯಲ್ಲಿರುತ್ತಾರೆ.

ಕುಂಭ

ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚನೆ ಬೇಡ. ಆತುರದ ನಿರ್ಧಾರ ಸಲ್ಲದು. ಆಂಜನೇಯನ ದರ್ಶನ ಮಾಡಿ.

ಮೀನ

ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: