Design a site like this with WordPress.com
Get started

ಮೇ 12, ಬುಧವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,
ಬುಧವಾರ, ಪಾಡ್ಯ ತಿಥಿ , ಕೃತಿಕಾ ನಕ್ಷತ್ರ
ರಾಹುಕಾಲ:12.19 ರಿಂದ 1.54
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09

ಮೇಷ

ಈ ದಿನದ ಪ್ರಗತಿ ಅಷ್ಟೊಂದು ಉತ್ತಮವಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.

ವೃಷಭ

ಗುರುಹಿರಿಯರಿಂದ ಪ್ರಶಂಸೆ ಗಳಿಸುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ ಅನುಭವಿಸುವಿರಿ. ಶಿವನ ಅನುಗ್ರಹದಿಂದ ಅನುಕೂಲ.

ಮಿಥುನ

ವಾಹನ ಖರೀದಿ ಯೋಗ. ಆರೋಗ್ಯದಲ್ಲಿ ಸುಧಾರಣೆ. ಕೃಷಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದೆ.

ಕಟಕ

ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಲಾಭ. ಭೂ ವ್ಯವಹಾರಕ್ಕೆ ಅಷ್ಟೊಂದು ಒಳ್ಳೆಯ ದಿನವಲ್ಲ. ಅದರಿಂದ ದೂರವಿರುವುದೇ ಒಳ್ಳೆಯದು. ದಿನಾಂತ್ಯದಲ್ಲಿ ಮನೆಯಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.

ಸಿಂಹ

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನ. ವಿವಾಹಾಕಾಂಕ್ಷಿಗಳಿಗೆ ಆಶಾಕಿರಣವೊಂದು ಗೋಚರಿಸಲಿದೆ. ನಿರುದ್ಯೋಗಿಗಳು ಜೀವನದಲ್ಲಿ ತಿರುವು ಪಡೆಯುವ ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸು.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಬಿಡುವಿನ ದಿನದಲ್ಲಿಯೂ ಹೆಚ್ಚಿನ ಕಾರ್ಯಭಾರ ನಡೆಸಬೇಕಾದೀತು. ಮೇಲಧಿಕಾರಿಗಳಿಂದ ಪ್ರಶಂಸೆ. ಮಹಿಳಾ ಕಾರ್ಮಿಕರಿಗೆ ಬಿಡುವಿನ ದಿನವಾಗಲಿದೆ.

ತುಲಾ

ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಆರೋಗ್ಯದಲ್ಲಿ ವ್ಯತ್ಯಯ ಕಂಡಬರಲಿದೆ. ಪ್ರತಿಸ್ಪರ್ಧಿಗಳ ಸವಾಲು ಎದರುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರಕಿ ಸಂಭ್ರಮ. ತೈಲೋದ್ಯಮದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ವಸ್ತ್ರ ವಿನ್ಯಾಸಕಾರರಿಗೆ ಅಧಿಕ ಮನ್ನಣೆ. ನೇಕಾರರಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯದ ಮೇಲೆ ನಿಗಾ ಇರಲಿ.

ಧನು

ಖರ್ಚಿನ ಮೇಲೆ ಹಿಡಿತವಿರಲಿ. ಆದಾಯದಲ್ಲಿ ಕುಂಠಿತ ಸಾಧ್ಯತೆ. ಅನಾವಶ್ಯಕ ವಿಷಯಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸುವಿರಿ. ಪತ್ನಿಯ ಸಕಾಲ ನೆರವಿನಿಂದ ಹಿತಾನುಭವ.

ಮಕರ

ಸರ್ಕಾರಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಕುಲದೇವತಾರಾಧನೆಯಿಂದ ಮಾನಸಿಕ ನೆಮ್ಮದಿ. ಸಾಮಾಜಿಕ ಸ್ಥಾನಮಾನಗಳು ದೊರಕುವ ಸಾಧ್ಯತೆ. ಕಲಾವಿದರಿಗೆ ಅನುಕೂಲಕರ ದಿನ. ಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ಕುಂಭ

ವ್ಯವಹಾರದಲ್ಲಿ ನಿಗಾ ವಹಿಸಲಿದ್ದೀರಿ. ಹಿರಿಯರೊಂದಿಗೆ ಮನಸ್ತಾಪ. ಇಷ್ಟ ಮಿತ್ರರ ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ. ದಿನದಾಂತ್ಯದಲ್ಲಿ ಯಶಸ್ಸು. ದೇವತಾರಾಧನೆಯಿಂದ ಮನಸ್ಸಿಗೆ ಉಲ್ಲಾಸ.

ಮೀನ

ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ. ತೈಲ ವಸ್ತುಗಳ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಗುರು ಆರಾಧನೆಯಿಂದ ಹೆಚ್ಚಿನ ಯಶಸ್ಸು. ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: