
ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣ ಪಕ್ಷ.
ವಾರ: ಮಂಗಳವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಭರಣಿ, ಯೋಗ: ಸೌಭಾಗ್ಯ
ಕರಣ: ಚತುಷ್ಪದ
ರಾಹುಕಾಲ:3.29 ರಿಂದ 5.04
ಗುಳಿಕಕಾಲ :12.19 ರಿಂದ 1.54
ಯಮಗಂಡಕಾಲ :9.09 ರಿಂದ 10.44
ಮೇಷ
ಮನೆಯಲ್ಲಿನ ರಂಪಾಟಗಳು ಜಾಸ್ತಿಯಾಗುವ ಸಾಧ್ಯತೆ. ಅನಿರೀಕ್ಷಿತ ಬೆಳವಣಿಗೆಯಿಂದ ಮಾನಸಿಕ ನೆಮ್ಮದಿ. ಸರ್ಕಾರಿ ನೌಕರರಿಗೆ ಪ್ರಶಂಸೆಯ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದ ದಿನ.
ವೃಷಭ
ಯಂತ್ರಾಗಾರಗಳಲ್ಲಿ ಅಗ್ನಿಯಿಂದ ಎಚ್ಚರ ಅಗತ್ಯ. ಅನಿರೀಕ್ಷಿತವಾದ ತಲೆನೋವಿಗೆ ಧೃತಿಗೆಡಬೇಕಾಗಿಲ್ಲ. ವೈದ್ಯರಿಗೆ ಕಾಲುನೋವಿನ ಸಾಧ್ಯತೆ. ಮಹಿಳಾ ಉದ್ಯಮಿಗಳಿಗೆ ಸಂತೃಪ್ತಿ.
ಮಿಥುನ
ಅದೃಷ್ಟದ ದಿನಕ್ಕಾಗಿ ಕಾಯುತ್ತಿರುವ ನಿಮಗೆ ಭಗವಂತನ ದಯೆ ಇದೆ. ನಿರೀಕ್ಷಿತ ಮಟ್ಟಕ್ಕೆ ನಿಮಗೆ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸಿನ ವ್ಯವಹಾರದಲ್ಲಿ ತೃಪ್ತಿದಾಯಕ ಬದುಕು. ಬಂಗಾರ ಖರೀದಿ ಮಾಡಲಿದ್ದೀರಿ.
ಕಟಕ
ದೂರದ ಬಂಧುಗಳ ಆಗಮನದಿಂದ ತೀರ್ಥಯಾತ್ರೆ ಬಗ್ಗೆ ನಿಷ್ಕರ್ಷೆ. ರತ್ನ ವ್ಯಾಪಾರಿಗಳಿಗೆ ಅನುಕೂಲ. ಗುಡಿ ಕೈಗಾರಿಕೆ ನಡೆಸುವವರಿಗೆ ಪ್ರಗತಿ. ಮನಸ್ಸಿಗೆ ಸಂತೋಷದಾಯಕ ದಿನ.
ಸಿಂಹ
ಅಧಿಕಾರಿಗಳ ಸಹಕಾರದಿಂದ ಕಾರ್ಯದಲ್ಲಿ ಪ್ರಗತಿ. ಮನಸ್ಸಿಗೆ ಸಂಬಂಧಪಟ್ಟ ವ್ಯವಹಾರ ನಡೆಸುವುದು ಉಚಿತವಲ್ಲ. ಹಿರಿಯರ ಆಶೀರ್ವಾದ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಪ್ರಗತಿ.
ಕನ್ಯಾ
ಮನಸ್ಸಿಗೆ ಸಂಬಂಧಪಟ್ಟರೂ ದೇಹಾರೋಗ್ಯದ ಬಗ್ಗೆ ಆಲಸ್ಯ ಬೇಡ. ವಾಹನ ವ್ಯಾಪಾರದಲ್ಲಿ ಪ್ರಗತಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ. ವನ್ಯ ಸಂಪತ್ತಿಗೆ ಅಧಿಕವಾದ ಪರಿಶ್ರಮ ಅಗತ್ಯ.
ತುಲಾ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಹಣಕಾಸಿನ ಬಗ್ಗೆ ಚಿಂತಿಸುವುದು ಬೇಡ. ಸ್ತ್ರೀಯರಿಗೆ ಮನಸ್ಸಿನ ಮೇಲೆ ನಿಯಂತ್ರಣವಿರಲಿ. ಗೊಂದಲಮಯ ಬದುಕಿನಿಂದ ಮುಕ್ತಿ.
ವೃಶ್ಚಿಕ
ಹಣ ಹೊಂದಿಸಲು ಬೇರೆಯವರ ಸಹಾಯವನ್ನು ಯಾಚಿಸಲಿದ್ದೀರಿ. ಔಷಧ ಸೇವನೆಯಲ್ಲಿ ಮುಂಜಾಗೃತೆ ಅಗತ್ಯ. ಮನಸ್ಸಿಗೆ ಸಂಬಂಧಿಸಿದ ವಿಷಯವನ್ನು ಬೇರೆಯವರಲ್ಲಿ ನಿವೇದಿಸಿಕೊಳ್ಳಿ.
ಧನು
ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತಿರುವ ಕಾರ್ಯಗಳು ಶೀಘ್ರದಲ್ಲಿ ನೆರವೇರಲಿವೆ. ಕುಶಲಕರ್ಮಿಗಳಿಗೆ ಅನುಕೂಲ. ಬಂಧುಗಳ ಆರ್ಥಿಕ ಸಹಾಯದಿಂದ ದೃಢತೆ.
ಮಕರ
ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ. ಹಳೆಯ ವೈಷಮ್ಯ ಗರಿಗೆದರುವ ಸಾಧ್ಯತೆ. ವಿದ್ಯಾರ್ಥಿಗಳು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಉತ್ತಮ. ವಿಪರೀತವಾದ ಖರ್ಚು. ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆಯ ಕಾಲ.
ಕುಂಭ
ಮಾನಸಿಕ ಸ್ಥೈರ್ಯ ಸದೃಢವಾಗಿ ಲಾಭದಾಯಕವಾದ ಬದುಕು. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಚರ್ಚೆ, ಸಂಗಾತಿಯಿಂದ ಸಮಾಧಾನದ ಜೊತೆಗೆ ನೆರವು ದೊರೆಯಲಿದೆ.
ಮೀನ
ಮನಸ್ಸಿಗೆ ಅನುಕೂಲವಾದ ಅನೇಕ ವಿಷಯಗಳಲ್ಲಿ ಸಾಫಲ್ಯತೆ ಪಡೆಯಲಿದ್ದೀರಿ. ವ್ಯತಿರಿಕ್ತವಾದ ವ್ಯವಹಾರದಲ್ಲಿ ತೊಡಗುವುದು ಬೇಡ. ಸಹೋದರರಿಂದ ಕಾರ್ಯಕ್ಕೆ ಅನುವು