
ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತಋತು,
ಚೈತ್ರ-ಮಾಸ, ಕೃಷ್ಣಪಕ್ಷ,
ಏಕಾದಶಿ, ಶುಕ್ರವಾರ,
ಪೂರ್ವ ಭಾದ್ರಪದ ನಕ್ಷತ್ರ (ಹಗಲು 12:26) ನಂತರ “ಉತ್ತರ ಭಾದ್ರಪದ ನಕ್ಷತ್ರ”.
ರಾಹುಕಾಲ 10:45ರಿಂದ 12:19
ಗುಳಿಕಕಾಲ 7:30 ರಿಂದ 9 :10
ಯಮಗಂಡಕಾಲ 3: 29ರಿಂದ 05:04
ಮೇಷ
ವೈವಾಹಿಕ ಜೀವನದಲ್ಲಿ ಭಾಗ್ಯೋದಯವನ್ನು ಕಾಣಲಿದ್ದೀರಿ. ರಾಜಕೀಯದಲ್ಲಿರುವವರಿಗೆ ಬರಸಿಡಿಲಿನ ಸುದ್ದಿಯೊಂದು ಬಂದೆರಗಲಿದೆ. ಬಂಧುಗಳಿಂದ ಸಹಾಯ. ಸ್ಥಿರಾಸ್ತಿ ಖರೀದಿಗೆ ಮನಸ್ಸು ಮಾಡಲಿದ್ದೀರಿ.
ವೃಷಭ
ಅನಿವಾರ್ಯ ಬದಲಾವಣೆಗಳಿಗೆ ಒಳಗಾಗಿ ಇದ್ದುದನ್ನು ಕಳೆದುಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನ ಅಲಕ್ಷಿಸದೆ ಇರುವುದು ಒಳ್ಳೆಯದು. ಹೊಸ ಕಾರ್ಯಯೋಜನೆಯಿಂದ ದೂರವಿರಿ.
ಮಿಥುನ
ನಿಮ್ಮ ಪಾಲಿನ ಶ್ರದ್ಧೆಯು ಅನುಕೂಲಕರವಾಗಿ ಪರಿಣಮಿಸಲಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಕಾರ್ಯಪ್ರವೃತ್ತರಾಗುವಿರಿ. ರಾಜಕೀಯದಲ್ಲಿ ತೊಡಗಿಕೊಂಡ ಯುವತಿಯರಿಗೆ ಯಶಸ್ಸು.
ಕಟಕ
ಸ್ಫೂರ್ತಿ ತುಂಬಿದ ಜೀವನದೊಂದಿಗೆ ಉತ್ತಮ ನೆಲೆ ಕಾಣಲಿದ್ದೀರಿ. ಧಾರಾಳವಾಗಿ ಹಣದ ಹರಿವು ನಿಮ್ಮೆಡೆಗೆ ಹರಿದು ಬರಲಿದೆ. ಉತ್ತಮವಾದ ಕುಟುಂಬ ಬಾಂಧವ್ಯದಲ್ಲಿ ವೃದ್ಧಿಯನ್ನು ಕಾಣುವಿರಿ.
ಸಿಂಹ
ಸಾಂಸಾರಿಕ ಸೌಖ್ಯಕ್ಕಾಗಿ ಹೊಸ ಪ್ರಯತ್ನ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಬಂದೆರಗುವ ಸಾಧ್ಯತೆ. ಹೊಸ ಆದಾಯ ಮೂಲದ ಅನ್ವೇಷಣೆ ಮಾಡಲಿದ್ದೀರಿ. ಬಂಧುಗಳಿಂದ ಸಹಾಯ. ಮನಸ್ಸಿನ ದುಗಡ ನಿವಾರಣೆಯಾಗಲಿದೆ.
ಕನ್ಯಾ
ಕರಕುಶಲ ಕಾರ್ಮಿಕರಿಗೆ ಮನ್ನಣೆ ಸಿಗಲಿದ್ದು, ಸರ್ಕಾರದಿಂದ ಹೆಚ್ಚಿನ ಸಹಾಯ ಸಹಕಾರ ನಿರೀಕ್ಷಿಸಬಹುದು. ಎಲ್ಲ ಕಾರ್ಯಗಳಲ್ಲಿಯೂ ತಲ್ಲೀನತೆಯಿಂದ ಸರಿ ಹೊಂದುವ ಸಾಧ್ಯತೆಗಳು ಕಂಡುಬರುತ್ತಿವೆ.
ತುಲಾ
ಆರ್ಥಿಕ ಅನುಕೂಲತೆಯೊಂದಿಗೆ ಸಾಮಾಜಿಕ ಗೌರವ ದೊರಕಲಿದೆ. ಮಾಡಿದ ಕೆಲಸ–ಕಾರ್ಯಗಳಲ್ಲಿ ಮನ್ನಣೆ ದೊರೆಯುತ್ತದೆ. ಹೊಸ ಕಾರ್ಯ ರೂಪಿಸುವಲ್ಲಿ ಮುಂಚಿತ ಯೋಚನೆ ಸಫಲವಾಗಲಿದ್ದು ಯಶಸ್ಸಿನತ್ತ ಪಯಣ.
ವೃಶ್ಚಿಕ
ಆರ್ಥಿಕ ಕ್ರೋಢಿಕರಣದ ಜೊತೆಗೆ ಮಂಗಳಕಾರ್ಯಗಳು ನಿಶ್ಚಯವಾಗುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಜನೆ ನಿರೂಪಿಸಲಿದ್ದೀರಿ. ದೂರ ದೂರಿನ ಪ್ರಯಾಣ ಬೇಡ. ವಾಹನ ಚಲಾವಣೆಯಲ್ಲಿ ಜಾಗೃತೆ.
ಧನು
ಮಿತ್ರರ ಸಹಕಾರದಿಂದಾಗಿ ರಾಜಕೀಯ ವ್ಯವಹಾರದಲ್ಲಿ ಸುಗಮತೆ. ಆರ್ಥಿಕ ದೃಢೀಕರಣದಿಂದಾಗಿ ಕಾರ್ಯಾನುಕೂಲ. ಮನೆಯಲ್ಲಿ ಹಬ್ಬದ ವಾತಾವರಣ. ಮನೆಯವರ ಅಹವಾಲನ್ನು ಗಮನಿಸುವುದು ಒಳಿತು.
ಮಕರ
ಹೊಸ ಉದ್ಯಮವೊಂದರಿಂದ ಆದಾಯದ ಸಾಧ್ಯತೆ ಇರಲಿದ್ದು ಉತ್ತಮ ಆಶಾಭಾವನೆ ಮುಂದುವರಿಯಲಿದೆ. ವೈದ್ಯರ ನೆರವಿನಿಂದಾಗಿ ಆರೋಗ್ಯದಲ್ಲಿ ಸ್ಥಿರತೆ. ಆರ್ಥಿಕ ಅಭಿವೃದ್ಧಿ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ.
ಕುಂಭ
ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತನೆಯಿಂದ ಉತ್ತಮ ಯಶಸ್ಸು. ವೈದ್ಯರಿಗೆ ಪ್ರಶಂಸೆ. ಬಂಧುಗಳ ಕಿರಿಕಿರಿಯಿಂದ ಬೇಸರವಾದರೂ ದೇವರ ಕೃಪೆ ನಿಮ್ಮ ಪಾಲಿಗೆ ಒದಗಿ ಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಮಾನಸಿಕ ತುಮುಲ.
ಮೀನ
ಆಲಸ್ಯ ಉದಾಸೀನತೆ ತೊಡೆದುಹಾಕಿ ಕಾರ್ಯದಲ್ಲಿ ಮಗ್ನರಾಗಿರಿ. ಅನಗತ್ಯ ಕೋಪದಿಂದ ನಷ್ಟದ ಸಾಧ್ಯತೆ. ದೈಹಿಕವಾಗಿ ಸಣ್ಣಪುಟ್ಟ ನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ಈಶ್ವರನ ಆರಾಧನೆಯಿಂದ ಶ್ರೇಯಸ್ಸು.