
ದಿನಾಂಕ :Saturday, 01 May 2021 ಪ್ಲವ ಸಂ|ರದ ಮೇಷ ಮಾಸ ದಿನ 18 ಸಲುವ ಚೈತ್ರ ಬಹುಳ ಪಂಚಮಿ 26|| ಗಳಿಗೆ ದಿನ ವಿಶೇಷ :ಕಾರ್ಮಿಕರ ದಿನ, ನೀಲಾವರ ರಥ ನಿತ್ಯ ನಕ್ಷತ್ರ :ಮೂಲಾ 10| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.11 ಗಂಟೆ
ಮೇಷ
ಮಕ್ಕಳೊಂದಿಗೆ ವಾದ, ವಿವಾದ ಮಾಡದಿರುವುದು ಉತ್ತಮ. ವಾಹನ ಚಾಲನೆ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಬಂಧುಗಳೊಂದಿಗಿನ ಭಿನ್ನಾಭಿಪ್ರಾಯ ದೂರಾಗಿ ಬಾಂಧವ್ಯ ವೃದ್ಧಿಯಾಗಲಿದೆ.
ವೃಷಭ
ತಾಳ್ಮೆಯಿಂದ ಕಾರ್ಯಸಿದ್ಧಿ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಹಿಳೆಯರು ಮಾತನಾಡುವುದಕ್ಕಿಂತ ಮೌನ ವಹಿಸುವುದು ಕ್ಷೇಮ.
ಮಿಥುನ
ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ದೈನಂದಿನ ವ್ಯವಹಾರಗಳಲ್ಲಿ ಸಂತಸ.
ಕಟಕ
ಸಾಂಸಾರಿಕ ಜೀವನದಲ್ಲಿ ಸಂತೃಪ್ತಿ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ. ಅತಿಯಾದ ಕೋಪ ಬೇಡ.
ಸಿಂಹ
ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನ ಖರೀದಿ ಮಾಡಲಿದ್ದೀರಿ.
ಕನ್ಯಾ
ಬಹುಕಾಲದ ಬಯಕೆಗಳು ಈಡೇರಲಿವೆ. ಋಣ ಪರಿಹಾರದಿಂದಾಗಿ ಸಂತೃಪ್ತಿ. ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸದೇ ಗುಪ್ತವಾಗಿರಿಸುವುದು ಕ್ಷೇಮ. ವಸ್ತ್ರ ವ್ಯಾಪಾರಗಳಿಗೆ ಹೆಚ್ಚಿನ ಆದಾಯ ತರಲಿದೆ.
ತುಲಾ
ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹದೊಂದಿಗೆ ಪ್ರಶಂಸೆ. ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ. ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಿ ಹೊಸ ಬದುಕಿಗೆ ನಾಂದಿಯಾಗಲಿದೆ.
ವೃಶ್ಚಿಕ
ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗೃಹ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಮಹಿಳೆಯರಿಗೆ ಸಾಮಾಜಿಕ ಗೌರವಾದರಗಳು ದೊರಕಲಿವೆ. ರಾಜಕೀಯದಲ್ಲಿ ಯಶಸ್ಸಿನ ಹೆಜ್ಜೆ ತುಳಿಯಲಿದ್ದೀರಿ.
ಧನು
ದೂರಾಲೋಚನೆಯಿಂದ ಮಾಡಿದ ಕಾರ್ಯಗಳಲ್ಲಿ ಯಶಸ್ಸು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ದೂರಪ್ರಯಾಣ ಮಾಡದಿರುವುದು ಒಳಿತು.
ಮಕರ
ಸಾಮಾಜಿಕ ಕಾರ್ಯಗಳಲ್ಲಿ ತುರುಸಿನಿಂದ ತೊಡಗಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಅವಶ್ಯ. ಮಕ್ಕಳ ಆರೋಗ್ಯದ ಕಡೆ ತುಸು ಗಮನ ವಹಿಸಿ. ಮಾನಸಿಕ ನೆಮ್ಮದಿಗಾಗಿ ದೇವರ ದರ್ಶನ ಮಾಡಿ.
ಕುಂಭ
ಆರ್ಥಿಕ ಅನುಕೂಲತೆ. ಮಕ್ಕಳಿಂದ ನೆಮ್ಮದಿ. ವಿದೇಶ ಪ್ರಯಾಣ ಯೋಗ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡಿಬರಲಿದೆ. ಮಿತ್ರರ ಸಹಾಯ ಸಹಕಾರಗಳಿಂದಾಗಿ ವ್ಯವಹಾರಗಳು ಸುಧಾರಿಸಲಿವೆ.
ಮೀನ
ದೈನಂದಿನ ಕಾರ್ಯಗಳಲ್ಲಿ ಆಸಕ್ತಿ. ಆಸ್ತಿ ವಿಷಯದಲ್ಲಿ ಕಲಹ ಎದುರಾಗುವ ಸಾಧ್ಯತೆ. ನೌಕರಿಯಲ್ಲಿರುವವರಿಗೆ ವರ್ಗಾವಣೆಯಿಂದ ಸ್ಥಾನಪಲ್ಲಟವಾಗುವ ಸಾಧ್ಯತೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡಲಿದ್ದೀರಿ.