ಪ್ಲವ ಸಂ|ರದ ಮೇಷಮಾಸ ದಿನ 2 ಸಲುವ ಚೈತ್ರ ಶುದ್ಧ ತದಿಗೆ 23 ಗಳಿಗೆದಿನ ವಿಶೇಷ :ಮತ್ಸ್ಯ ಜಯಂತಿ, ಕಡಿಯಾಳಿ ರಥನಿತ್ಯ ನಕ್ಷತ್ರ :ಕೃತಿಕಾ 35|| ಗಳಿಗೆಮಹಾ ನಕ್ಷತ್ರ :ಆಶ್ವಿನಿಋತು :ವಸಂತ ರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ

ಮೇಷ
ಸಾಮಾಜಿಕ ಕಾರ್ಯಕರ್ತರಿಗೆ ಸಂತಸ ತರುವ ದಿನವಾಗಿದೆ. ಮನೆಯಲ್ಲಿ ವಸ್ತಾçಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣಗೊಳ್ಳುವ ಸಾಧ್ಯತೆ. ಅನಿರೀಕ್ಷಿತ ಕಾರ್ಯ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ
ವೃಷಭ
ಆರ್ಥಿಕ ತೊಂದರೆಯಿAದ ಮುಕ್ತರಾಗುವಿರಿ. ಕೋರ್ಟ್ ಕಛೇರಿಗಳಲ್ಲಿನ ವ್ಯಾಜ್ಯಗಳು ಪರಿಹಾರ ವಾಗಿ ನೆಮ್ಮದಿ ಮೂಡಿಬರಲಿದೆ. ವಸ್ತಾçಭರಣಗಳನ್ನು ಖರೀದಿಸಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಮಿಥುನ
ಆರ್ಥಿಕ ಅಭಿವೃದ್ಧಿ ಕಂಡುಬರುವುದು. ವ್ಯವಹಾರದಲ್ಲಿ ಲಾಭ ಸಾಧ್ಯತೆ. ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ. ಸಂಗಾತಿಯಿಂದ ಸಂತಸದ ಸುದ್ದಿ.
ಕಟಕ
ಹೊಸ ಸಂಬಂಧಿಗಳಿಂದ ಹೊಸ ಯೋಜನೆಗಳಿಗೆ ಉತ್ಸಾಹ ಮೂಡುವುದು. ಶುಭಕಾರ್ಯಗಳ ಸಂಕಲ್ಪ ಈಡೇರಿ ಸಂತಸ ಮೂಡುವುದು. ತೃಪ್ತಿದಾಯಕ ಕೌಟುಂಬಿಕ ಜೀವನ. ಅವಸರದ ನಿರ್ಧಾರಗಳು ಸೂಕ್ತವಲ್ಲ. ಮಹಿಳೆಯರಿಗೆ ಗೌರವ ಪ್ರಾಪ್ತಿ.
ಸಿಂಹ
ಅನಾವಶ್ಯಕ ವ್ಯವಹಾರಗಳಲ್ಲಿ ಭಾಗಿಯಾಗುವುದರಿಂದ ಆರೋಪಗಳನ್ನು ಎದುರಿಸಬೇಕಾದೀತು. ಹೊಸ ಯೋಜನೆಯನ್ನು ನಿರೂಪಿಸುವಲ್ಲಿ ಯಶಸ್ಸು. ಮಾತೃವರ್ಗದವರಿಂದ ಸಹಕಾರ ದೊರಕುವುದು. ದೂರದ ಪ್ರಯಾಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕನ್ಯಾ
ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಅಕಾಲಿಕ ತಪಾಸಣೆಯಿಂದ ಕಿರಿಕಿರಿ ಹಾಗೂ ವೃಥಾ ಖರ್ಚು ಸಂಭವ. ದಾಂಪತ್ಯದಲ್ಲಿ ಸೌಹಾರ್ದತೆ, ಸಂತಸ ಮೂಡುವುದು. ಸೋದರರಿಂದ ಸಹಕಾರ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ತುಲಾ
ಸಂಪನ್ಮೂಲಗಳ ಅಭಿವೃದ್ಧಿ ಯಿಂದಾಗಿ ಚಿಂತೆಗಳು ದೂರವಾಗಿ ನೆಮ್ಮದಿ ಮನೆಮಾಡಲಿದೆ. ಮಹಿಳೆಯರ ಮನೋಭಿಲಾಷೆಗಳು ಈಡೇರುವವು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವ ಸಾಧ್ಯತೆ. ಪ್ರಾಪ್ತವಯಸ್ಕರಿಗೆ ಸೂಕ್ತ ಸಂಬAಧ ದೊರೆತು ವಿವಾಹ ನಿಶ್ಚಯ ಸಾಧ್ಯತೆ
ವೃಶ್ಚಿಕ
ದೂರದ ಪ್ರಯಾಣಗಳನ್ನು ಮಾಡದಿರುವುದು ಉಚಿತ. ಸಂಗಾತಿಯ ಸಹಕಾರದಿಂದಾಗಿ ಸಾಂಸಾರಿಕ ನೆಮ್ಮದಿ ದೊರಕುವುದು. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬAಧಗಳು ಕೂಡಿಬರಲಿವೆ. ದೇವತಾ ದರ್ಶನದಿಂದಾಗಿ ಮಾನಸಿಕ ನೆಮ್ಮದಿ.
ಧನು
ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ. ಮಕ್ಕಳ ಶ್ರೇಯೋಭಿವೃದ್ಧಿಯಿಂದಾಗಿ ಮಾನಸಿಕ ತೃಪ್ತಿ ಹೊಂದುವಿರಿ. ಮನೆಯಲ್ಲಿ ಸಂತೋಷದ ವಾತಾವರಣ.
ಮಕರ
ಧಾವಂತದ ಕೆಲಸಗಳು ಎದುರಾಗುವ ಸಾಧ್ಯತೆ ಕಂಡುಬರುವುದು. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಸಲುವಾಗಿ ದೂರ ಪ್ರಯಾಣ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಆತುರತೆ ಬೇಡ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಸಾಧ್ಯತೆ.
ಕುಂಭ
ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಪ್ರಗತಿಯನ್ನು ಕಾಣಬಹುದು. ಸಾಮಾಜಿಕ ಕಾರ್ಯಗಳಿಂದ ಗೌರವ ಪ್ರಾಪ್ತವಾಗುವುದು. ಸರ್ಕಾರದಿಂದಾಗುವ ಕೆಲಸ ಕಾರ್ಯಗಳು ಸುಗಮವಾಗುವವು. ಉದ್ಯೋಗ ನಿಮಿತ್ತ ದೂರ ಪ್ರಯಾಣ ಯೋಗ. ಆರೋಗ್ಯ ಲಾಭ.
ಮೀನ
ನೆರೆಹೊರೆಯವರೊಂದಿಗೆ ವಿನಾಕಾರಣ ನಿಷ್ಟೂರಕ್ಕೊಳಗಾಗುವ ಸಾಧ್ಯತೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿದೆ. ಉದ್ಯೋಗದಲ್ಲಿರುವವರಿಗೆ ಸ್ಥಳ ಬದಲಾವಣೆ. ಇಷ್ಟದೇವತಾ ದರ್ಶನದಿಂದ ನೆಮ್ಮದಿ. ಮನೆಯಲ್ಲಿ ಸಂತಸ.