Design a site like this with WordPress.com
Get started

ಎಪ್ರಿಲ್ 11, ಭಾನುವಾರ,2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 28 ಸಲುವ ಫಾಲ್ಗುಣ ಬಹುಳ ಅಮಾವಾಸ್ಯೆ 60 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಭಾದ್ರಾ 6|| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.22 ಗಂಟೆ

ಮೇಷ

ಬಿಡುವಿಲ್ಲದ ಕೆಲಸ–ಕಾರ್ಯಗಳ ನಡುವೆಯೂ ಪ್ರಯಾಣದಲ್ಲಿ ಸುಖಾನುಭವ. ಆರೋಗ್ಯದ ಬಗ್ಗೆ ಗಮನ ಅಗತ್ಯ. ಸ್ವಂತ ಉದ್ಯಮದಲ್ಲಿ ತೊಡಗಿರುವವರಿಗೆ ಕೆಲಸ-ಕಾರ್ಯಗಳಲ್ಲಿ ಹಿನ್ನಡೆ. ಹಿತೈಷಿಗಳ ಸಹಕಾರ ಲಭ್ಯವಾಗಲಿದೆ.

ವೃಷಭ

ನಿರೀಕ್ಷಿಸಿದಂತೆ ಕೆಲಸ-ಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಒತ್ತಡ ಉಂಟಾಗಲಿದೆ. ಕ್ರೀಡಾಪಟುಗಳಿಗೆ ಗೌರವಾದರಗಳು ಲಭ್ಯವಾಗಲಿವೆ. ಅಮೂಲ್ಯ ವಸ್ತುಗಳ ಶೋಧನೆಗಾಗಿ ಕಾಲ ವ್ಯಯ.

ಮಿಥುನ

ವಾಹನ ಯಂತ್ರೋಪಕರಣಗಳಿಂದ ಅನುಕೂಲಕರ ವಾತಾವರಣ. ವಿದ್ಯಾರ್ಥಿಗಳಿಗೆ ಆಟ, ಪಾಠಗಳಲ್ಲಿ ಹೆಚ್ಚಿನ ಪ್ರಗತಿ. ಕುಟುಂಬದಲ್ಲಿ ಒಮ್ಮತದ ನಿರ್ಣಯದಿಂದಾಗಿ ನೆಮ್ಮದಿ. ಸಂತಸ ತರುವ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ಕಟಕ

ಕೌಟುಂಬಿಕ ಸಾಮರಸ್ಯದೊಂದಿಗೆ ಶಾಂತಿಯುತ ಬದುಕು. ಸಾಮಾಜಿಕ ಹಾಗೂ ಬಂಧುಗಳ ಗೌರವಾದರಗಳಿಗೆ ಪಾತ್ರರಾಗಲಿದ್ದೀರಿ. ವಿಪರೀತ ಕೆಲಸ–ಕಾರ್ಯಗಳಿಂದಾಗಿ ಹಾಗೂ ಓಡಾಟಗಳಿಂದಾಗಿ ದೇಹಾಲಸ್ಯ.

ಸಿಂಹ

ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮನೆಯಲ್ಲಿ ಸಮಾಧಾನಕರ ವಾತಾವರಣ. ವಂಚನೆಯಿಂದ ಪಾರಾಗಲು ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವುದು ಅವಶ್ಯ. ಹಿರಿಯರಿಂದ ಉತ್ತಮ ಸಲಹೆ.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಉಂಟಾಗುವ ಸಾಧ್ಯತೆ. ಲೇವಾದೇವಿ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದಾಗಿ ಮುಂದಿನ ಕೆಲಸಗಳು ಸುಗಮವಾಗಲಿವೆ.

ತುಲಾ

ಕೆಲಸ–ಕಾರ್ಯಗಳು ನಿರ್ವಿಘ್ನದಾಯಕವಾಗಿ ನಡೆಯಲಿವೆ. ವ್ಯಾಪಾರ, ವೃತ್ತಿಗಳಲ್ಲಿ ಲಾಭ. ಬಂಧು–ಬಾಂಧವರ ಹೊಗಳಿಕೆಗೆ ಪಾತ್ರರಾಗುವ ಅವಕಾಶಗಳು ಕಂಡುಬರುತ್ತಿದೆ. ಭೂ ವ್ಯವಹಾರದಲ್ಲಿ ಪ್ರಗತಿ.

ವೃಶ್ಚಿಕ

ಕಾರ್ಯಕಲಾಪಗಳು ಸುಗಮವಾಗಿ ಸಾಗಲಿವೆ. ವಾದ, ವಿವಾದ ಕಟ್ಟಲೆಗಳಲ್ಲಿ ನಿಮ್ಮ ಪರವಾಗಿ ನ್ಯಾಯ ದೊರಕಲಿದೆ. ಕಟ್ಟಡ ಖರೀದಿ ಮಾಡುವ ಸಾಧ್ಯತೆ. ಸಮಾಧಾನ ಚಿತ್ತದಿಂದ ಮನಸ್ತಾಪ ದೂರವಾಗಲಿದೆ.

ಧನು

ಆರೋಗ್ಯದಲ್ಲಿ ವೃದ್ಧಿ. ಬರಬೇಕಾದ ಬಾಕಿ ಹಣ ಸಕಾಲದಲ್ಲಿ ಹಿಂದಿರುಗಿ ಅನುಕೂಲ ತರಲಿದೆ. ಕೆಲಸ–ಕಾರ್ಯಗಳಲ್ಲಿ ಸಾಮಾನ್ಯ ಪ್ರಗತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಪ್ರಿಯ ವ್ಯಕ್ತಿಗಳ ಆಗಮನ ಸಾಧ್ಯತೆ.

ಮಕರ

ಲೇವಾದೇವಿ ವ್ಯವಹಾರಸ್ಥರಿಗೆ ಹೆಚ್ಚಿನ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಂಭವ. ಮಹಿಳೆಯರಿಗೆ ಸಂತಸ ತರುವ ದಿನ. ಶತ್ರುಗಳ ಭೀತಿಯಿಂದ ಮುಕ್ತರಾಗಲಿದ್ದೀರಿ. ಹಿತಕರ ಸುದ್ದಿ ಆಲಿಸಲಿದ್ದೀರಿ.

ಕುಂಭ

ಮಾನಸಿಕ ಬೇಸರ. ವಾಹನಗಳ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ವ್ಯಾಪಾರಸ್ಥರಿಗೆ ಧನ ಹಾನಿಯುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಉದ್ಯೋಗ ಅಥವಾ ವೃತ್ತಿಯಲ್ಲಿ ಒತ್ತಡದ ಕೆಲಸಗಳು ಎದುರಾದೀತು. ಹಣಕಾಸು ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಹಿರಿಯರೊಂದಿಗೆ ವ್ಯವಹಾರದ ಕುರಿತಾದ ಸಮಾಲೋಚನೆ ನಡೆಸಲಿದ್ದೀರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: