
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು,
ಮಾಘಮಾಸ, ಶುಕ್ಲಪಕ್ಷ,
ಚತುರ್ದಶಿ / ಪೌರ್ಣಿಮೆ, ಶುಕ್ರವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ,
ರಾಹುಕಾಲ: 11: 7ರಿಂದ 12: 36
ಗುಳಿಕಕಾಲ: 08:0 9 ರಿಂದ 09:38
ಯಮಗಂಡಕಾಲ: 3.34 ರಿಂದ 05:03
ಮೇಷ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರ. ವ್ಯಾಪಾರಸ್ಥರಿಗೆ ಗಣನೀಯ ಲಾಭ. ಮನೆಮಂದಿಯೊಂದಿಗೆ ಪ್ರವಾಸ ಮಾಡುವ ಸಯೋಗ
ವೃಷಭ
ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಅಂತಹ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲ. ಮನೆಯವರೊಂದಿಗೆ ದೂರದ ಪ್ರಯಾಣ. ದೇವತಾ ದರ್ಶನ ಭಾಗ್ಯ ಕಂಡುಬರುತ್ತಿದೆ. ಆರೋಗ್ಯದಲ್ಲಿ ವೃದ್ಧಿ
ಮಿಥುನ
ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆಯಿದ್ದು, ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಗ್ಧತೆ ಕಾಪಾಡುವುದು ಒಳ್ಳೆಯದು. ಸಮಾಧಾನ ನಿಮ್ಮ ನೆರವಿಗೆ ಬರುವುದು.
ಕಟಕ
ಸಾಲಕೊಟ್ಟವರು ಯಡೆಬಿಡದೆ ಮರುಪಾವತಿಗಾಗಿ ತಗಾದೆ ಹೂಡಬಹುದು. ದ್ವೇಷಕ್ಕೆ ಮುಂದಾಗದೇ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.
ಸಿಂಹ
ಗುಂಪುಗಾರಿಕೆಯಿಂದಾಗಿ ಧನ ಮಾನಗಳ ಹಾನಿ ಸಂಭವ. ಅನ್ಯರ ಮೇಲೆ ಸಂಶಯ ಒಳ್ಳೆಯದಲ್ಲ. ದೂರದಲ್ಲಿರುವ ಮಕ್ಕಳ ಆಗಮನ ಸಾಧ್ಯತೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ.
ಕನ್ಯಾ
ನಿಮ್ಮ ಇಂದಿನ ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ದೂರದ ಪ್ರಯಾಣ ಖಂಡಿತ ಬೇಡ. ಮಕ್ಕಳಿಂದ ಮನಸ್ಸಿಗೆ ಸಂತಸ. ಮಡದಿ ನಿಮ್ಮ ಚಿಂತೆಗಳನ್ನು ದೂರಮಾಡಲಿದ್ದಾಳೆ.
ತುಲಾ
ಗೆಳೆಯರೊಂದಿಗೆ ಸಮಾಲೋಚನೆಯ ಸಾಧ್ಯತೆ. ಕೆಲಸಕಾರ್ಯಗಳಲ್ಲಿ ನಿಮ್ಮ ಸ್ವಭಾವದಿಂದಾಗಿ ಹಿನ್ನಡೆ. ದೃಢನಿರ್ಧಾರದಿಂದ ವ್ಯವಹರಿಸಿ. ಹಿರಿಯರ ಬೆಂಬಲದಿಂದಾಗಿ ಯಶಸ್ಸನ್ನು ಕಾಣುವಿರಿ
ವೃಶ್ಚಿಕ
ಬೇರೆಯವರ ಥಳುಕು ಬಳುಕಿನ ಮಾತಿಗೆ ಮರುಳಾಗಿ ಮೋಸಹೋಗುವ ಸಾಧ್ಯತೆ. ಹಿರಿಯರ ಹಿತನುಡಿಗಳನ್ನು ಮನ್ನಿಸಿ ಅವರ ಆರೋಗ್ಯದ ಕಡೆಗೆ ಗಮನ ವಹಿಸಿ. ದಿನದ ಮಟ್ಟಿಗೆ ದೂರದ ಪ್ರಯಾಣ ಬೇಡ.
ಧನು
ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಗುರು ವೃಂದದವರಿಂದ ಸೂಕ್ತ ಮಾರ್ಗದರ್ಶನ.
ಮಕರ
ಮನಸ್ಸಿನಲ್ಲಿ ಹರಿಯುತ್ತಿರುವ ಪ್ರೀತಿ ಪ್ರೇಮಗಳ ಹುಚ್ಚು ಹೊಳೆಗೆ ಲಗಾಮು ಹಾಕಿಕೊಳ್ಳಿ. ಸ್ನೇಹದ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ
ಕುಂಭ
ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ವಿಷಯದಲ್ಲಿ ಎಚ್ಚರದಿಂದಿರುವುದು ಒಳಿತು. ಬಾಲ ಬಡುಕರನ್ನು ದಿನದಮಟ್ಟಿಗೆ ದೂರವಿಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.
ಮೀನ
ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ. ಅಂತಹ ಸಂದರ್ಭಗಳನ್ನು ಮುಂದೂಡುವುದೇ ಲೇಸು. ವಾಹನ ಖರೀದಿಯ ಯೋಗ. ಯಂತ್ರೋಪಕರಣಗಳ ವ್ಯವಹಾರದಲ್ಲಿ ಅಧಿಕ ಲಾಭದ ನಿರೀಕ್ಷೆ.