
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ತ್ರಯೋದಶಿ/ಚತುರ್ದಶಿ,
ಗುರುವಾರ
ರಾಹುಕಾಲ 02:05 ರಿಂದ 3.34
ಗುಳಿಕಕಾಲ 09:38 ರಿಂದ 11:07
ಯಮಗಂಡಕಾಲ 6.41 ರಿಂದ 08:09
ಮೇಷ
ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಪ್ರಗತಿ ಉಂಟಾಗುವುದು. ಕುಟುಂಬದಲ್ಲಿ ಸೌಹಾರ್ದ. ಸೋದರರಿಂದ ಸಹಕಾರ ಮಕ್ಕಳ ಅಭಿವೃದ್ಧಿಯಿಂದಾಗಿ ಸಂತೃಪ್ತಿ.
ವೃಷಭ
ವೈಯಕ್ತಿಕ ತೊಂದರೆಯಿಂದ ಮುಕ್ತರಾಗುವಿರಿ. ಸಮಸ್ಯೆಗಳು ಪರಿಹಾರ ಕಾಣುವವು. ಸ್ಥಿರಾಸ್ತಿ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಯ.
ಮಿಥುನ
ಹೊಸ ಯೋಜನೆಗಳಿಗೆ ಉತ್ಸಾಹ ಮೂಡುವುದು. ಶುಭಕಾರ್ಯಗಳ ಸಂಕಲ್ಪ ಈಡೇರಿ ಸಂತಸ. ತೃಪ್ತಿದಾಯಕ ಕೌಟುಂಬಿಕ ಜೀವನ. ಮಹಿಳೆಯರಿಗೆ ಗೌರವ ಪ್ರಾಪ್ತಿ.
ಕಟಕ
ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ ಸಾಧ್ಯತೆ. ಕುಟುಂಬದ ಹಿರಿಯರ ಮನೋಭಿಲಾಷೆಗಳು ಈಡೇರುವವು. ಆರ್ಥಿಕ ಸಂಪನ್ಮೂಲಗಳ ಅಭಿವೃದ್ಧಿಯಿಂದಾಗಿ ಸಂತೃಪ್ತಿ.
ಸಿಂಹ
ವೈಯುಕ್ತಿಕ ಜೀವನದಲ್ಲಿ ಅಭಿವೃದ್ಧಿ. ಸಾಮಾಜಿಕ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಧಾನ್ಯಾಭಿವೃದ್ಧಿ. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ. ಸಂಗಾತಿಯಿಂದ ಸಂತಸದ ಸುದ್ದಿ.
ಕನ್ಯಾ
ಪರಸ್ಪರ ಭಿನ್ನಾಭಿಪ್ರಾಯಗಳು ಪರಿಹಾರವಾಗಿ ಸುಖದಾಂಪತ್ಯ ಜೀವನಕ್ಕೆ ನಾಂದಿ. ಶುಭ ಸಮಾರಂಭಗಳಲ್ಲಿ ಭಾಗಿ. ಕೆಲಸ ಕಾರ್ಯಗಳಲ್ಲಿ ಆತುರ ಬೇಡ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಸಾಧ್ಯತೆ.
ತುಲಾ
ಸರ್ಕಾರಿ ನೌಕರಿಯಲ್ಲಿರುವವರಿಗೆ ಅನುಕೂಲ. ಹೊಸ ಯೋಜನೆಯನ್ನು ನಿರೂಪಿಸುವಲ್ಲಿ ಯಶಸ್ಸು. ಅನಾವಶ್ಯಕ ವ್ಯವಹಾರಗಳಲ್ಲಿ ತಲೆ ಹಾಕದಿರಿ. ಮಾತೃವರ್ಗದವರಿಂದ ಸಹಕಾರ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಪ್ರಗತಿ. ಮಾತಿನಿಂದ ಗೌರವ ಪ್ರಾಪ್ತಿ. ಸರ್ಕಾರದಿಂದಾಗುವ ಕೆಲಸ ಕಾರ್ಯಗಳು ಸುಗಮ. ಉದ್ಯೋಗ ನಿಮಿತ್ತ ದೂರ ಪ್ರಯಾಣ ಯೋಗ.
ಧನು
ಸಾಮಾಜಿಕ ಕಾರ್ಯಕರ್ತರಿಗೆ ಇರಿಸುಮುರಿಸು ಸಾಧ್ಯತೆ. ಮನೆಯಲ್ಲಿ ವಸ್ತ್ರಾಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣ. ವಿದ್ಯಾಭ್ಯಾಸಕ್ಕಾಗಿ ದೂರಪ್ರಯಾಣ. ಆರೋಗ್ಯದ ಬಗ್ಗೆ ಎಚ್ಚರ.
ಮಕರ
ದೂರ ಪ್ರಯಾಣದಲ್ಲಿ ಧನ ನಷ್ಟವಾಗುವುದು. ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿ. ಪ್ರಿಯ ವ್ಯಕ್ತಿಗಳ ಆಗಮನ. ಮಕ್ಕಳ ಶ್ರೇಯೋಭಿವೃದ್ಧಿಯಿಂದಾಗಿ ಮಾನಸಿಕ ತೃಪ್ತಿ
ಕುಂಭ
ಇಂದಿನ ಮಟ್ಟಿಗೆ ದೂರದ ಪ್ರಯಾಣಗಳನ್ನು ಮುಂದೂಡುವುದು ಸೂಕ್ತ. ಸಂಗಾತಿಯ ಸಹಕಾರದಿಂದಾಗಿ ಸಾಂಸಾರಿಕ ನೆಮ್ಮದಿ. ಅಪೇಕ್ಷಿತರಿಗೆ ವಿವಾಹ ಸಂಬಂಧಗಳು ಕೂಡಿಬರಲಿವೆ.
ಮೀನ
ಅನಾವಶ್ಯಕ ಮಾತುಗಳಿಂದಾಗಿ ನಿಷ್ಟೂರಕ್ಕೊಳಗಾಗುವ ಸಾಧ್ಯತೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ. ಇಷ್ಟದೇವತಾ ದರ್ಶನದಿಂದ ನೆಮ್ಮದಿ.