
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ,ನವಮಿ,
ಶನಿವಾರ,ಅನುರಾಧ ನಕ್ಷತ್ರ,
ರಾಹುಕಾಲ 9:42-11:10
ಗುಳಿಕಕಾಲ 6: 47-8:15
ಯಮಗಂಡಕಾಲ 02:05-3:32
ಮೇಷ
ಮಿತ್ರರ ಸಹಕಾರದಿಂದ ವ್ಯಾವಾಹಾರಿಕ ಚತುರತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಲಿದ್ದೀರಿ. ಗುರು ಹಿರಿಯರ ಅವಗಣನೆ ಸಲ್ಲದು. ಆರೋಗ್ಯದ ಕಡೆಗೆ ಗಮನ ವಹಿಸುವುದು ಅವಶ್ಯ.
ವೃಷಭ
ಶ್ರಮವರಿಯದ ಕೆಲಸ ಕಾರ್ಯಗಳು. ತುರುಸಿನ ಓಡಾಟ ಮಾಡಬೇಕಾದ ಅನಿವಾರ್ಯತೆ ತಲೆದೋರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ.
ಮಿಥುನ
ಆತ್ಮವಿಶ್ವಾಸದ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಸುಯೋಗ. ಸಹೋದ್ಯೋಗಿಗಳಲ್ಲಿ ಹರ್ಷ ಮೂಡಿಸಲಿದ್ದೀರಿ. ಮನೆಯವರೊಂದಿಗೆ ದೇವತಾ ದರ್ಶನ.
ಕಟಕ
ವ್ಯವಹಾರದಲ್ಲಿ ಮೋಸಹೋಗವ ಸಾಧ್ಯತೆ ಇದ್ದು ಎಚ್ಚರಿಕೆಯ ನಡೆ ಅಗತ್ಯ. ದಿನ ನಿತ್ಯದ ಕಾರ್ಯಕಲಾಪಗಳು ಸುಗಮ. ಅಪರೂಪದ ವ್ಯಕ್ತಿಯೊಬ್ಬರ ಭೇಟಿಯಿಂದಾಗಿ ಸಂತಸ. ಸಂಗಾತಿಯೊಂದಿಗೆ ಸಂತಸ ಹಂಚಿಕೊಳ್ಳಲಿದ್ದೀರಿ.
ಸಿಂಹ
ಸಮಯೋಚಿತ ಕೆಲಸಗಳಿಂದಾಗಿ ಹಿರಿಯರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಜ್ಯ, ತಗಾದೆಗಳು ರಾಜಿ ವ್ಯವಹಾರಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ.
ಕನ್ಯಾ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಸರ್ಕಾರದಿಂದ ದೊರೆಯಬೇಕಾದ ಅನುಕೂಲತೆಗಳು ಸಕಾಲದಲ್ಲಿ ಲಭ್ಯ. ಕೃಷಿ ಉತ್ಪನ್ನಗಳ ವ್ಯಾಪಾರಸ್ಥರಿಗೆ ಅನುಕೂಲಕರ ವಾತಾವರಣ.
ತುಲಾ
ಅಡೆತಡೆಗಳನ್ನು ಎದುರಿಸಿ ಧೈರ್ಯದಿಂದ ಕಾರ್ಯ ಸಾಧನೆ ಮಾಡಲಿದ್ದೀರಿ. ಕ್ರಯ ವಿಕ್ರಯಗಳಲ್ಲಿ ಲಾಭ ನಿರೀಕ್ಷಿಸಬಹುದು. ಪತ್ನಿಯ ಅನಾರೋಗ್ಯದಿಂದಾಗಿ ವಿಪರೀತ ಖರ್ಚು. ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ.
ವೃಶ್ಚಿಕ
ಉದ್ಯೋಗ ಕ್ಷೇತ್ರದಲ್ಲಿ ವಿಪರೀತ ಒತ್ತಡದ ಸಾಧ್ಯತೆ. ಬಿಡುವಿಲ್ಲದ ಓಡಾಟ. ವಾಹನಗಳಿಂದ ತೊಂದರೆ ಉಂಟಾಗುವ ಸಾಧ್ಯತೆ. ಆರೋಗ್ಯದಲ್ಲಿ ಸ್ಥಿರತೆ. ಕೌಟುಂಬಿಕ ಶಾಂತಿ ನೆಮ್ಮದಿಗಳನ್ನು ಸಾಧಿಸಲಿದ್ದೀರಿ.
ಧನು
ಕಾರ್ಯಸಾಧನೆಗಾಗಿ ವಿಪರೀತ ಶ್ರಮ ವಹಿಸಬೇಕಾದೀತು. ಸಹೋದ್ಯೋಗಿಗಳಲ್ಲಿನ ಅನುಮಾನಗಳು ಪರಸ್ಪರ ಅಪನಂಬಿಕೆಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಫಲ.
ಮಕರ
ಕುಟುಂಬದಲ್ಲಿ ಶಾಂತವಾತಾವರಣ. ವ್ಯಾಪಾರದಲ್ಲಿ ವೃದ್ಧಿ. ಸಂತೋಷದ ಸುದ್ದಿಗಳನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಸುಖಾನುಭವ. ಹಿರಿಯರೊಂದಿಗಿನ ಸಮಾಲೋಚನೆ ಉತ್ತಮ ದಾರಿ ಕಲ್ಪಿಸಲಿದೆ.
ಕುಂಭ
ಉದ್ಯೋಗದಲ್ಲಿ ಪ್ರಗತಿ. ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಹೊಂದಲಿದ್ದೀರಿ. ಬಂಧುಗಳೊಂದಿಗೆ ಮನಃಸ್ತಾಪ. ಅನವಶ್ಯಕ ವೆಚ್ಚವನ್ನು ಭರಿಸಬೇಕಾದೀತು. ದೂರದ ಪ್ರಯಾಣ ಉಚಿತವಲ್ಲ.
ಮೀನ
ಕೆಲಸ ಕಾರ್ಯಗಳಲ್ಲಿ ಅಡಚಣೆ ಸಾಧ್ಯತೆ. ಕ್ರಯ ವಿಕ್ರಯಗಳಲ್ಲಿ ಹಾನಿ ಸಂಭವಿಸಬಹುದು. ಕುಟುಂಬದಲ್ಲಿ ಮಾತಿನ ಚಕಮಕಿಯ ಸಾಧ್ಯತೆ. ಸಾಮಾಧಾನದ ನಡೆಯಿಂದ ಕಾರ್ಯಾನುಕೂಲ ಉಂಟಾಗಲಿದೆ.