
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ದ್ವಿತೀಯ,
ಶನಿವಾರ, ಮಖ ನಕ್ಷತ್ರ.
ರಾಹುಕಾಲ: 9.42 ರಿಂದ 11:09
ಗುಳಿಕಕಾಲ: 06:49 ರಿಂದ 8:15
ಯಮಗಂಡಕಾಲ: 02:03 ರಿಂದ03:30
ಮೇಷ
ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರಾಲೋಚನೆಯಿಂದ ಕೈಗೊಂಡ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೇಮವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ.
ವೃಷಭ
ಮಿತ್ರರ ಸಹಾಯದಿಂದಾಗಿ ಧನಾಗಮನ. ಯಾಂತ್ರಿಕ ವಿಷಯ ಪರಿಣತರಿಗೆ ಉತ್ತಮ ಅವಕಾಶ. ಕೌಟುಂಬಿಕ ವಾತಾವರಣ ಸಂತೋಷಕರವಾಗಿ ಮೂಡಿಬರಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದಂತ ಸಮಸ್ಯೆ ಕಾಣಿಸಿಕೊಂಡೀತು.
ಮಿಥುನ
ದ್ರವ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಕ್ರೀಡಾಪಟುಗಳಿಗೆ ಆಸಕ್ತರಿಗೆ ಉತ್ಸುಕತೆಯನ್ನೂ ಪ್ರೋತ್ಸಾಹವನ್ನೂ ತಂದುಕೊಡುವ ದಿನವಾಗಿದೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಗುರುದೇವತಾರಾಧನೆ ಸೂಕ್ತ.
ಕಟಕ
ವೃತ್ತಿನಿರತ ಮಹಿಳೆಯರಿಗೆ ಬದಲಾವಣೆಗಳು ಸಂಭವಿಸುವ ಸಾಧ್ಯತೆ. ಆಧ್ಯಾತ್ಮಿಕ ಜೀವನದಲ್ಲಿ ನೆಮ್ಮದಿ. ಪತ್ರಿಕಾರಂಗದಲ್ಲಿರುವವರಿಗೆ ಹೆಚ್ಚಿನ ಕೀರ್ತಿ ತಂದುಕೊಡಲಿದೆ. ಅನಾವಶ್ಯಕ ವ್ಯವಹಾರಗಳಿಗೆ ಕೈ ಹಾಕದಿರಿ.
ಸಿಂಹ
ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹ. ಬಿಡುವಿಲ್ಲದ ಕೆಲಸದಿಂದಾಗಿ ದೇಹಾಯಾಸ. ಕರ್ತವ್ಯ ನಿರ್ವಹಣೆ ನಿಮಿತ್ತ ಸ್ಥಳ ಬದಲಾವಣೆ ಸಾಧ್ಯತೆ. ರಾಜಕೀಯ ರಂಗದವರಿಗೆ ತುರುಸಿನ ಓಡಾಟ ಯಶಸ್ಸು.
ಕನ್ಯಾ
ಮಹಿಳೆಯರ ಮಾನಸಿಕ ಒತ್ತಡಗಳು ಕಡಿಮೆಯಾಗಿ ನಿರಾಳತೆ. ಸಹೋದರರ ಸಹಕಾರದಿಂದಾಗಿ ವೃತ್ತಿಯಲ್ಲಿನ ಸಮಸ್ಯೆಗಳು ಪರಿಹಾರ. ಸೂಕ್ತ ನಿರ್ಣಯದಿಂದಾಗಿ ಗೌರವ ಪ್ರಾಪ್ತಿ. ರಾಜಕೀಯ ಬಿಡುವಿನ ದಿನವಾಗಲಿದೆ.
ತುಲಾ
ವ್ಯವಹಾರಗಳಲ್ಲಿ ಜಾಗೃತೆ ವಹಿಸುವುದು ಉತ್ತಮ. ವಿಶೇಷ ಏರಿಳಿತಗಳು ಕಂಡುಬರಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಗಣ್ಯ ವ್ಯಕ್ತಿಗೊಳೊಬ್ಬರ ಸಂದರ್ಶನ ಸಾಧ್ಯತೆ ಇದೆ.
ವೃಶ್ಚಿಕ
ದಾಯಾದಿಗಳೊಂದಿಗಿನ ಆಸ್ತಿ ವ್ಯವಹಾರಗಳು ಇತ್ಯರ್ಥವಾಗುವ ಸಾಧ್ಯತೆ. ಮಿತ್ರರಿಗಾಗಿ ಮಾಡುವ ಕೆಲಸಗಳಲ್ಲಿ ಯಶಸ್ಸು. ಗೃಹನಿರ್ಮಾಣ ಕಾರ್ಯಗಳು ಯಶಸ್ವಿಯಾಗುವುದು. ವೃತ್ತಿ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿ.
ಧನು
ಋಣ ಪರಿಹಾರದಿಂದಾಗಿ ನಿರಾಳತೆ. ಮಕ್ಕಳಿಂದ ನೆಮ್ಮದಿ. ಆರೋಗ್ಯದಲ್ಲಿ ತೊಂದರೆ. ಆಸ್ತಿ ಖರೀದಿ ಅಥವಾ ಅಭಿವೃದ್ಧಿಯಾಗುವುದು. ಯಾವುದೇ ಕೆಲಸ ಕೈಗೊಳ್ಳುವಾಗ ದುಡುಕು ಸಲ್ಲದು. ಕೌಟುಂಬಿಕ ನೆಮ್ಮದಿ.
ಮಕರ
ದಿನದ ಮಟ್ಟಿಗೆ ಗೆಳೆಯರ ಮಾತನ್ನು ತೂಗಿ ನೋಡುವುದು ಉತ್ತಮ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ. ವಸ್ತ್ರಾಭರಣ ಖರೀದಿಯ ಸಾಧ್ಯತೆ. ದೈನಂದಿನ ಕಾರ್ಯದಲ್ಲಿ ಉತ್ಸುಕತೆ ತುಂಬಿಬರಲಿದೆ.
ಕುಂಭ
ಮಹಿಳೆಯರು ದಿನದ ಮಟ್ಟಿಗೆ ರಾಜಕೀಯ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಬೇಡ. ಜಾಮೀನು ನೀಡದೇ ಇರುವುದು ಉತ್ತಮ. ಹಿರಿಯರ ಸಲಹೆಯಿಂದಾಗಿ ಕೆಲಸ–ಕಾರ್ಯಗಳಲ್ಲಿ ಯಶಸ್ಸು.
ಮೀನ
ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ. ವ್ಯವಹಾರ ಕುಶಲತೆಯಿಂದಾಗಿ ಧನಲಾಭ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಸ್ವಯಂ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ.