Design a site like this with WordPress.com
Get started

ಜನವರಿ 27, ಬುಧವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ,
ತಿಥಿ: ಚತುರ್ದಶಿ,
ನಕ್ಷತ: ಪುನರ್ವಸು,
ರಾಹುಕಾಲ: 4.48 ರಿಂದ 6.13
ಗುಳಿಕಕಾಲ: 3.22 ರಿಂದ 4.48
ಯಮಗಂಡಕಾಲ: 12.31 ರಿಂದ 1.57

ಮೇಷ

ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ಸಕಾಲಿಕ ನೆರವು ನೀಡುವುದರಿಂದ ಮನ್ನಣೆ, ಗೌರವಗಳನ್ನು ಹೊಂದುವ ಸಾಧ್ಯತೆ ಇದೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು.

ವೃಷಭ

ವಿವಾಹ ನಿಷ್ಕರ್ಷೆಯ ವಿಷಯದಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹನಿರ್ಮಾಣ ವಿಷಯದಲ್ಲಿ ನೆಮ್ಮದಿ.

ಮಿಥುನ

ಒಂದು ಪ್ರಮುಖವಾದ ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ ನಿಮ್ಮದಾಗಲಿದೆ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ.

ಕಟಕ

ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಗೆ ಅಗತ್ಯ. ಪ್ರೀತಿಪಾತ್ರರೊಂದಿಗಿನ ಒಡನಾಟದಿಂದಾಗಿ ಸಂಬಂಧ ಗಟ್ಟಿಯಾಗಲಿದೆ.

ಸಿಂಹ

ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಅಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

ಕನ್ಯಾ

ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ.

ತುಲಾ

ನೌಕರಸ್ಥರಿಗೆ ಮುಂಬಡ್ತಿ ಅಥವಾ ಉದ್ಯೋಗದಲ್ಲಿಯ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ‌. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ ತಲೆದೋರುವ ಸಾಧ್ಯತೆ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ. ‌

ವೃಶ್ಚಿಕ

ಹೂಡಿಕೆ ಮಾಡುವ ವಿಷಯಗಳಲ್ಲಿ ಬಹಳ ಮಹತ್ವದ್ದಾದುದರಿಂದ ಎಚ್ಚರಿಕೆ ಅಗತ್ಯ. ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ.

ಧನು

ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ–ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು.

ಮಕರ

ಸಹೋದ್ಯೋಗಿಗಳಿಂದ ಅಥವಾ ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸುವುದು ಅವಶ್ಯಕ. ದೇವೀ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳು ಈಡೇರುವ ಸಾಧ್ಯತೆ.

ಕುಂಭ

ವಿವಾಹಾಕಾಂಕ್ಷಿಗಳಿಗೆ ಅನೇಕ ಸಾಧ್ಯತೆಗಳು ತೆರೆದುಕೊಳ್ಳಲಿದ್ದು ಸರಿಯಾದ ಆಯ್ಕೆಯಿಂದಾಗಿ ಉತ್ತಮ ಸಂಗಾತಿಯನ್ನು ದಕ್ಕಿಸಿಕೊಳ್ಳಬಹುದು. ಗೃಹಬಳಕೆ ವಸ್ತುಗಳ ವ್ಯವಹಾರಸ್ಥರಿಗೆ ಅತ್ಯುತ್ತಮ ಲಾಭ ತಂದುಕೊಡುವ ದಿನ.

ಮೀನ

ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಬಹಳ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: