
ಪಂಚಾಂಗ :ಭಾನುವಾರ, 24.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.03.37
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಏಕಾದಶಿ (ರಾ.09.50) ನಕ್ಷತ್ರ: ರೋಹಿಣಿ(ರಾ.12.01)
ಯೋಗ: ಬ್ರಹ್ಮ (ರಾ.10.28) ಕರಣ: ವಣಿಜ್-ಭದ್ರೆ(ಬೆ.10.01-ರಾ.10.58)
ಮಳೆ ನಕ್ಷತ್ರ: ಶ್ರವಣ ಮಾಸ: ಮಕರ ತೇದಿ: 11
ಮೇಷ
ಬಂಧುಮಿತ್ರರಿಗೆ ಉತ್ತಮ ಸಹಾಯ ಸಹಕಾರಗಳು ದೊರಯಲಿದೆ. ಉದ್ವೇಗಗೊಳ್ಳದೇ ಶಾಂತರೀತಿಯಿAದ ವ್ಯವಹರಿಸಿದಲ್ಲಿ ಕೆಲಸ ಕಾರ್ಯಗಳು ಸುಗಮಗೊಳ್ಳುವವು. ಮನೆ ಜನರ ಸಹಕಾರದಿಂದಾಗಿ ನೆಮ್ಮದಿಯ ವಾತಾವರಣ ಮೂಡಲಿದೆ.
ವೃಷಭ
ಯಾವುದೇ ನಿರ್ದಾರ ತೆಗೆದುಕೊಳ್ಳುವ ಮೊದಲು ಆತ್ಮೀಯರಲ್ಲಿ ಚರ್ಚಿಸಿ, ಮತ್ತೊಮ್ಮೆ ಯೋಚಿಸುವುದು ಉತ್ತಮ. ಸಾರಿಗೆ ಉದ್ಯೋಗಿಗಳಿಗೆ ಪ್ರಗತಿಯೊಂದಿಗೆ ಲಾಭದಲ್ಲಿ ಹೆಚ್ಚಳ ಕಂಡುಬರುವುದು. ಹೊಸ ಮನೆಗೆ ಪ್ರವೇಶ ಮಾಡುವ ಸಾಧ್ಯತೆ.
ಮಿಥುನ
ರಿಯಲ್ ಎಷ್ಟೇಟ್ ನಂತಹ ಭೂ ಸಂಬAಧಿ ವ್ಯವಹಾರಗಳಲ್ಲಿ ತೊಡಗಿರುವವರ ವ್ಯವಹಾರದಲ್ಲಿ ಚುರುಕುತನ ಕಂಡುಬರುವುದು. ಕಾರ್ಖಾನೆ ಯ ಕೆಲಸದಲ್ಲಿರುವವರಿಗೆ ಪ್ರಗತಿಯನ್ನು ಕಾಣಬಹುದು. ಮನೆಯವರ ಒತ್ತಾಯದಿಂದಾಗಿ ವಾಹನ ಖರೀದಿ ಸಾಧ್ಯತೆ.
ಕಟಕ
ಗಮನವಿಟ್ಟು ಕೆಲಸ ಮಾಡಬೇಕಾಗುವುದು. ನಿಮ್ಮ ಎಲ್ಲಾ ವ್ಯವಹಾರಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅವಶ್ಯ. ಜಾಮೀನು ವಿಷಯಗಳಿಗೆ ಸಂಬAಧಿಸಿದAತೆ ನೆರೆಯವರಲ್ಲಿ ಮಾತುಕತೆ ನಡೆಯುವ ಸಾಧ್ಯತೆ. ವ್ಯವಹಾರ ಚತುರತೆಯಿಂದಾಗಿ ಆರ್ಥಿಕ ಲಾಭ. ಮಾನಸಿಕ ನೆಮ್ಮದಿ.
ಸಿಂಹ
ವಾಹನಗಳ ವ್ಯವಹಾರದಿಂದಾಗಿ ಅಧಿಕ ಲಾಭವನ್ನು ನಿರೀಕ್ಷಿಸಬಹುದು. ನ್ಯಾಯಾಲಯದ ವಿಚಾರಗಳಿಗಾಗಿ ನಡೆಸುವ ಅಲೆದಾಟ ಕಡಿಮೆಯಾಗುವುದು. ಹೊಸ ಹೊಸ ಕೆಲಸ ಕಾರ್ಯಗಳನ್ನ ಪ್ರಾರಂಭಿಸಲು ಅತ್ಯುತ್ತಮ ದಿನವಾಗಿರುವುದು.
ಕನ್ಯಾ
ದೊಡ್ಡ ವ್ಯವಹಾರವೊಂದರ ಬಗ್ಗೆ ಯೋಚನೆ ರೂಪಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಕಛೇರಿಯಲ್ಲಿ ಹೊಸ ಸಹೋದ್ಯೋಗಿಯೊಬ್ಬರ ಪರಿಚಯವಾಗುವುದು. ಸಕುಟುಂಬ ದೇವಾಲಯ ದರ್ಶನ ಸಾಧ್ಯತೆ. ದೂರದ ಪ್ರಯಾಣ ಯೋಜನೆ.
ತುಲಾ
ನೀವು ತೆಗೆದುಕೊಂಡ ನಿರ್ಧಾರಗಳಿಗೆ ಯಾವುದೇ ಚ್ಯುತಿ ಬಾರದೆ ಸರಿಯಾದ ಮಾರ್ಗದಲ್ಲಿ ಸಾಗುವವು. ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ. ಮಕ್ಕಳಿಗೆ ಉದ್ಯೋಗ ದೊರೆಯುವ ವಾ ಬದಲಾವಣೆಯ ಸಾಧ್ಯತೆ ಕಂಡುಬರುವುದು.
ವೃಶ್ಚಿಕ
ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದಾಗಿ ಉದ್ಯೋಗ ಲಭ್ಯವಾಗುವುದು. ಉದ್ಯೋಗ ಅರ್ಜಿಯ ಅನುಮೋದನೆ ಒಂದು ಪತ್ರವು ನಿಮ್ಮ ಕೈ ಸೇರುವ ಸಾಧ್ಯತೆ ಇರುವುದು. ಧಾನ್ಯ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು.
ಧನು
ಈ ದಿನದ ಕೆಲಸಕಾರ್ಯಗಳಲ್ಲಿ ಹಿಂದೆ ಇದ್ದ ಅಡಚಣೆಗಳು ಹಾಗೂ ಭಿನ್ನಾಭಿಪ್ರಾಯಗಳು ದೂರವಾಗುವವು. ಮಾನಸಿಕ ಸಮತೋಲದಿಂದಾಗಿ ನೆಮ್ಮದಿ ದೊರಕುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವ ಅವಕಾಶ ದೊರೆಯುವುದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.
ಮಕರ
ಎಂದಿನ ಕೆಲಸಗಳನ್ನು ಸಲೀಸಾಗಿ ಮುಂದುವರಿಸಿಕೊAಡು ಹೋಗಲು ಬಯಸುವಿರಿ. ನೀವು ದೂರ ಮಡುತ್ತಿರುವ ವಿಷಯಗಳ ಬಗ್ಗೆ ಈಗ ಗಮನ ಹರಿಸಬೇಕಾದೀತು. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಅವಶ್ಯ.
ಕುಂಭ
ಸಮಸ್ಯೆಗಳನ್ನು ಯಥೋಚಿತವಾಗಿ ಬಗೆಹರಿಸಿಕೊಳ್ಳುವ ಅವಕಾಶಗಳು ಲಭಿಸಲಿದ್ದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಕಳೆದು ಹೋಗಬಹುದಾದ ಹಳೆಯ ಸಂಬAಧ – ವ್ಯವಹಾರಗಳನ್ನು ಕಳಚಿಕೊಳ್ಳದೇ ನವಿರಾಗಿ ಮುಂದುವರಿಸಿಕೊಳ್ಳುವುದು ಉತ್ತಮ.
ಮೀನ
ನಿರ್ಮಾಣದ ಕೆಲಸಗಳಿಗಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಬೇಕಾದೀತು. ಸಾಮಾಜಿಕ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸಾಧ್ಯತೆ. ನಿರುದ್ಯೋಗಿಗಳಿಗೆ ಫೈನಾನ್ಸ್ ಮುಂತಾದ ಹಣಕಾಸು ಸಂಸ್ಥೆಗಳಲ್ಲಿ ಅವಕಾಶ ಒದಗಿಬರಲಿದೆ.