
20-1-2021 ಬುಧವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 6 ಸಲುವ ಪೌಷ ಶುದ್ಧ ಸಪ್ತಮ 15|| ಗಳಿಗೆದಿನ ವಿಶೇಷ :ಗುರು ಅಸ್ತನಿತ್ಯ ನಕ್ಷತ್ರ :ರೇವತಿ 14 ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ
ಮೇಷ
ಬರವಣಿಗೆ ಮತ್ತು ಮುದ್ರಣ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ ಸಿಗಲಿದೆ. ರಂಗಭೂಮಿ ಹಾಗೂ ಚಲನಚಿತ್ರರಂಗದ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಗೌರವಾದರಗಳು ದೊರಕಲಿದೆ.
ವೃಷಭ
ಕನಸುಗಳನ್ನು ನನಸು ಮಾಡಲು ಶ್ರಮ ವಹಿಸಬೇಕಾಗುವುದು. ಬೇಳೆಕಾಳು ಮುಂತಾದ ದ್ವಿದಳ ಧಾನ್ಯಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ. ಮಕ್ಕಳ ಉದ್ಯೋಗಕ್ಕಾಗಿ ಶ್ರಮ ವಹಿಸಬೇಕಾದೀತು.
ಮಿಥುನ
ವೈಯಕ್ತಿಕ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು. ನೌಕರಿಯಲ್ಲಿರುವವರಿಗೆ ಪದೋನ್ನತಿ ಅಥವಾ ಉದ್ಯೋಗ ಬದಲಾವಣೆಯ ಸಾಧ್ಯತೆ. ರಾಜಕೀಯ ವ್ಯಕ್ತಿಗಳೊಂದಿಗೆ ವಿಶೇಷ ಸಮಾಲೋಚನೆ ಮಾಡುವಿರಿ.
ಕಟಕ
ಮಹಿಳಾ ರಾಜಕಾರಣಿಗಳಿಗೆ ಪಕ್ಷ ರಾಜಕಾರಣದಲ್ಲಿ ಎಲ್ಲಿಲ್ಲದ ಘನತೆ ಗೌರವಗಳು ಪ್ರಾಪ್ತವಾಗುವವು. ಮನೆಯವರ ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ಸಿಂಹ
ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಯಶಸ್ಸು. ಕಾರ್ಮಿಕವರ್ಗದವರಿಗೆ ಕೆಲಸದ ಒತ್ತಡದಿಂದಾಗಿ ದೇಹಾಯಾಸ ಉಂಟಾಗಲಿದೆ. ಸರ್ಕಾರಿ ಕೆಲಸಗಳಿಗಾಗಿ ಅಲೆದಾಡುವ ಸಾಧ್ಯತೆ ಕಂಡುಬರುವುದು.
ಕನ್ಯಾ
ಕಚೇರಿಯಲ್ಲಿ ಸಾಧನೆಯ ಕೆಲಸಗಳನ್ನು ಮಾಡುವಿರಿ. ಕೆಲಸ ಕಾರ್ಯಗಳನ್ನು ಚುರುಕು ಮಾಡಬೇಕಾಗುವುದು. ಕುಟುಂಬದ ವಿಷಯಗಳ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಸಾಧ್ಯತೆ.
ತುಲಾ
ಅತಿಯಾದ ಉತ್ಸಾಹದಿಂದ ನಿಮ್ಮ ವೃತ್ತಿಜೀವನದಲ್ಲಿ ಹೊಸ ತಿರುವು ಪಡೆಯುವಿರಿ. ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ. ದೇವತಾ ದರ್ಶನ ಭಾಗ್ಯವಿದೆ.
ವೃಶ್ಚಿಕ
ನಿಮ್ಮ ವೃತ್ತಿಕೌಶಲ ಹಾಗೂ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಹಣ ಹೂಡಿಕೆಯಲ್ಲಿ ತೊಡಗಲು ಅತ್ಯಂತ ಪ್ರಶಸ್ತ ಕಾಲ. ವ್ಯಾಪಾರ ವಹಿವಾಟಿನಿಂದಾಗಿ ಉತ್ತಮ ಲಾಭ ದೊರಕುವ ಸಾಧ್ಯತೆ.
ಧನು
ಈ ದಿನ ಬಹಳ ಶಾಂತತೆಯಿಂದ ಕೂಡಿದ ನೆಮ್ಮದಿಯ ದಿನವಾಗಿರುವುದು. ಹೊಸ ಯೋಜನೆಯನ್ನು ರೂಪಿಸಲು ಸಕಾಲ. ಆಸಕ್ತಿ ವಿಷಯಗಳಿಂದಾಗಿ ಗೌರವಾನ್ವಿತ ಹುದ್ದೆ ಲಭಿಸುವ ಸಾಧ್ಯತೆ ಕಂಡುಬರುವುದು.
ಮಕರ
ನಿಜವಾದ ಭಾವನೆಗಳಿಂದ ಪ್ರಾಮಾಣಿಕವಾಗಿರಲು ಸಾಧ್ಯ. ಅನಿರೀಕ್ಷಿತ ಬೆಳವಣಿಗೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ. ನ್ಯಾಯಾಲಯದಲ್ಲಿನ ವ್ಯವಹಾರಗಳಲ್ಲಿ ನಿಮ್ಮ ಬಗ್ಗೆ ಸಕಾರಾತ್ಮಕ ನಿರ್ಣಯ ಹೊರಬೀಳುವುದು.
ಕುಂಭ
ಎಲ್ಲಾ ತರಹದಲ್ಲೂ ಶುಭದಿನ. ತರಕಾರಿ ಮುಂತಾದ ಹಸಿರು ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಲಾಭ ದೊರಕಲಿದೆ. ಮಕ್ಕಳೊಂದಿಗೆ ಸಂತಸದ ದಿನ. ಬಂಧುಮಿತ್ರರ ಆಗಮನ ಸಾಧ್ಯತೆ.
ಮೀನ
ಹಳೆಯ ಸಮಸ್ಯೆಗಳನ್ನು ಕೆದಕುವ ಬದಲು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವಿರಿ. ವೃತ್ತಿಜೀವನದ ಬಗ್ಗೆ ಅಪಾರವಾದ ವಿಶ್ವಾಸವಿದೆ. ಮೇಲಧಿಕಾರಿಗಳಿಂದ ಕಿರಿಕಿರಿಯ ಸಾಧ್ಯತೆ ಇದ್ದು, ದಿನದಾಂತ್ಯಕ್ಕೆ ತಿಳಿಗೊಳ್ಳುವುದು.