
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ಹುಣ್ಣಿಮೆ,
ನಕ್ಷತ್ರ: ಆರಿದ್ರ,
ರಾಹುಕಾಲ: 12.30 ರಿಂದ 1.50
ಗುಳಿಕಕಾಲ: 11.10 ರಿಂದ 12.30
ಯಮಗಂಡಕಾಲ: 8.29 ರಿಂದ 9.49
ಮೇಷ
ಬಹುದಿನಗಳಿಂದ ಬಾಕಿ ಇರುವ ಹಣ ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಅಂದುಕೊಂಡ ಕೆಲಸ–ಕಾರ್ಯಗಳು ನಿರ್ವಿಘ್ನವಾಗಿ ನಡೆಯುವವು.
ವೃಷಭ
ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಖರ್ಚು.
ಮಿಥುನ
ಆರ್ಥಿಕ ಸಮತೋಲನ ಕಂಡುಬರುವುದು. ನಿಮ್ಮ ಮೇಲಿನ ಆಪಾದನೆಗಳಿಂದ ಮುಕ್ತರಾಗಿ ಗೌರವಕ್ಕೆ ಪಾತ್ರರಾಗಲಿದ್ದೀರಿ. ಕೆಲಸ–ಕಾರ್ಯಗಳಲ್ಲಿ ಉತ್ಸಾಹ. ದೇವಿ ಸನ್ನಿಧಿಯಲ್ಲಿ ತುಪ್ಪದ ದೀಪ ಹಚ್ಚಿ.
ಕಟಕ
ಸಹೋದ್ಯೋಗಿಗಳಿಂದ ಸಕಾರಾತ್ಮಕ ಸಹಾಯ ದೊರಕಲಿದೆ. ಸಮಾಜದಲ್ಲಿ ನಿಮ್ಮ ಪರಿಶ್ರಮದ ಫಲವನ್ನು ಬೇರೆಯವರು ಸವಿಯುವ ಸಾಧ್ಯತೆ. ಕಾಲಕ್ರಮದಲ್ಲಿ ನಿಮ್ಮ ಶ್ರಮದ ಅರಿವಾಗಿ ಗೌರವ ಸಿಗಲಿದೆ.
ಸಿಂಹ
ವಿಪರೀತ ಕಾರ್ಯಬಾಹುಳ್ಯದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ. ಸಮಾಧಾನದಿಂದ ವರ್ತಿಸುವುದು ಉತ್ತಮ. ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ಮನಸ್ಸಿಗೆ ನಿರಾಳವಾಗಿ ನೆಮ್ಮದಿ ದೊರಕಲಿದೆ.
ಕನ್ಯಾ
ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಅತಿಯಾದ ಮಾತಿನಿಂದಾಗಿ ವೃಥಾ ವೈಮನಸ್ಸು ಉಂಟಾಗುವ ಸಾಧ್ಯತೆ. ಶಾರದೆಯ ಆರಾಧನೆ ಯಶಸ್ಸನ್ನು ನೀಡುವುದು.
ತುಲಾ
ಬೇರೆಯವರ ವ್ಯವಹಾರದಿಂದ ಮೋಸ ಹೋಗುವ ಸಾಧ್ಯತೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಸಮಾಧಾನದಿಂದ ಮುಂದುವರೆಯುವುದು ಸೂಕ್ತ. ಬೇರೆಯವರ ಟೀಕೆಗಳಿಗೆ ಕಿವಿಗೊಡಬೇಡಿ.
ವೃಶ್ಚಿಕ
ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ. ತಜ್ಞರಿಂದ ಸೂಕ್ತ ಸಲಹೆ, ಸಹಾಯಗಳನ್ನು ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಸುಖನುಭವ ಉಂಟಾಗಲಿದೆ.
ಧನು
ವಾಹನ, ಆಸ್ತಿ ಖರೀದಿಯ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ದೊರೆಯಲಿದೆ. ಬಹುದಿನಗಳ ಬಯಕೆ ಈಡೇರುವ ಸಾಧ್ಯತೆ. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ದೂರದ ಪ್ರಯಾಣದ ಸಾಧ್ಯತೆ.
ಮಕರ
ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸಮಯವಾಗಿದೆ. ನಿಮ್ಮ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದು ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ. ವ್ಯವಹಾರದ ಭರದಲ್ಲಿ ಕುಟುಂಬ ಕಡೆಗಣನೆ ಸರಿಯಲ್ಲ.
ಕುಂಭ
ಕುಟುಂಬದವರೊಡನೆ ಧಾರ್ಮಿಕಕ್ಷೇತ್ರ ದರ್ಶನ ಲಭ್ಯವಾಗಲಿದೆ. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗುವ ಕಾಲ. ದೈನಂದಿನ ವ್ಯವಹಾರಗಳಲ್ಲಿ ಉತ್ಸಾಹ ಮೂಡಿ ಆದಾಯ. ಗೃಹನಿರ್ಮಾಣ ಯೋಜನೆ ಸಿದ್ಧವಾಗುವ ಸಾಧ್ಯತೆ.
ಮೀನ
ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಲಿದೆ. ಅಲಂಕಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕುಟುಂಬಕ್ಕೊಂದು ವಿಶೇಷ ಗೌರವ ತಂದುಕೊಡಲಿದ್ದಾರೆ.