
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ,ಭರಣಿ ನಕ್ಷತ್ರ/ಕೃತಿಕ ನಕ್ಷತ್ರ,
ರಾಹುಕಾಲ : 09:32 ರಿಂದ 10:58
ಗುಳಿಕಕಾಲ : 06:41 ರಿಂದ 08:06
ಯಮಗಂಡಕಾಲ : 01:49 ರಿಂದ 3.15
ಮೇಷ
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಒತ್ತಡಗಳನ್ನು ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು.
ವೃಷಭ
ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ್ಯ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಗಣಪತಿ ಆರಾಧನೆ ಸೂಕ್ತ.
ಮಿಥುನ
ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ. ಸನ್ನಿಹಿತವಾದ ಬದಲಾವಣೆಗಳಿಗೆ ನಿಮ್ಮನ್ನು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವುದು ಅತ್ಯವಶ್ಯ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ.
ಕಟಕ
ವಿದ್ಯಾರ್ಥಿಗಳಿಗೆ, ತಾಂತ್ರಿಕ ತರಬೇತಿ ಪಡೆಯುತ್ತಿರುವವರಿಗೆ ಅತ್ಯಂತ ಮಹತ್ವದ ಕಾಲ. ಕಚೇರಿ ಕೆಲಸಗಳಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸುವ ಅವಕಾಶ ನಿಮ್ಮದಾಗಲಿದೆ. ಮೇಲಧಿಕಾರಿಗಳನ್ನು ಗೌರವದಿಂದ ಕಾಣಿರಿ.
ಸಿಂಹ
ಅವಸರದಿಂದ ಅವಘಡಗಳನ್ನು ತಂದುಕೊಳ್ಳುವ ಸಾಧ್ಯತೆ. ವ್ಯವಧಾನವಿರಲಿ. ವಾರಾಂತ್ಯದ ಸಂತೋಷಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಚಲಾವಣೆಯಲ್ಲಿ ಜಾಗೃತೆಯಿಂದಿರಿ. ಶನಿಯ ಕೃಪೆಗಾಗಿ ಎಣ್ಣೆ ದೀಪ ಹಚ್ಚಿ.
ಕನ್ಯಾ
ಏಕಕಾಲದಲ್ಲಿ ಅನೇಕ ಕಾರ್ಯಗಳಲ್ಲಿ ಮಗ್ನರಾಗಲು ಯೋಚಿಸಬೇಡಿ. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ವ್ಯಾಪಾರಿಗಳಿಗೆ ಅತ್ಯುತ್ತಮವಾದ ಅವಕಾಶಗಳು ಒದಗಿಬರಲಿದೆ.
ತುಲಾ
ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ನೇರ ಹಾಗೂ ದಿಟ್ಟ ನಡವಳಿಕೆಯ ಅಗತ್ಯ ಕಂಡುಬರುತ್ತಿದೆ. ಹೊಸ ಹೊಸ ಮಾರ್ಗಗಳ ಮೂಲಕ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ.
ವೃಶ್ಚಿಕ
ಬಯಕೆಗಳು ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಕಷ್ಟವಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಗುರುವಿನ ಆರಾಧನೆಯಿಂದ ಯಶಸ್ಸು.
ಧನು
ಕಾರ್ಯವೈಫಲ್ಯಗಳು ಕಂಡರೂ ಧೃತಿಗೆಡಬೇಕಾಗಿಲ್ಲ. ಕಾರಣಗಳನ್ನು ಹುಡುಕಿ ಮುನ್ನಡೆದಲ್ಲಿ ಯಶಸ್ಸನ್ನು ಕಾಣುವಿರಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ.
ಮಕರ
ಹಣಕಾಸಿನ ವಿಚಾರದಲ್ಲಿ ನೀವು ಹೆಚ್ಚಿನ ಚಿಂತನೆ ನಡೆಸುವಿರಿ. ನಿವೃತ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ಅಧ್ಯಾತ್ಮದತ್ತ ಒಲವು ತೋರುವಿರಿ.
ಕುಂಭ
ಅವಿವಾಹಿತರಿಗೆ ಉತ್ತಮ ಅವಕಾಶ ದೊರೆಯಲಿದೆ. ಪ್ರೇಮಿಗಳ ವಿಚಾರದಲ್ಲಿ ಹಿರಿಯರ ಸಮ್ಮತಿ ದೊರಕುವುದು. ಬಂಧುಬಾಂಧವರ ಸಹಕಾರದಿಂದ ಉತ್ತಮ ಫಲ ದೊರಕಲಿದೆ.
ಮೀನ
ಸೃಜನಶೀಲಕಾರ್ಯಗಳಲ್ಲಿ ಮಗ್ನರಾಗಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಕ್ಷಮತೆಯಿಂದ ಒತ್ತಡಗಳು ದೂರವಾಗಲಿವೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.