
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ, ಚತುರ್ಥಿ,
ಶುಕ್ರವಾರ, ಶ್ರವಣ ನಕ್ಷತ್ರ,
ರಾಹುಕಾಲ 10:54 ರಿಂದ 12 :20
ಗುಳಿಕಕಾಲ 08:02 ರಿಂದ 09:28
ಯಮಗಂಡಕಾಲ 3: 11ರಿಂದ 04:37
ಮೇಷ
ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ರಾಜಕೀಯದಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾದೀತು. ಮಾನಸಿಕ ಚಂಚಲತೆ.
ವೃಷಭ
ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.
ಮಿಥುನ
ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.
ಕಟಕ
ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವ.
ಸಿಂಹ
ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.
ಕನ್ಯಾ
ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿಯು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಧೃತಿಗೆಡಬೇಕಾದ ಅಗತ್ಯವಿಲ್ಲ. ಈ ದಿನವನ್ನು ಖುಷಿಯಾಗಿ ಕಳೆಯಲಿದ್ದೀರಿ.
ತುಲಾ
ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.
ವೃಶ್ಚಿಕ
ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ.
ಧನು
ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನವಾಗಲಿದೆ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ.
ಮಕರ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಸುವಲ್ಲಿ ಸಫಲರಾಗುತ್ತೀರಿ. ರಕ್ತಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.
ಕುಂಭ
ಬಹುದಿನಗಳ ವೃತ್ತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ನಿವೃತ್ತರಿಗೆ ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ.
ಮೀನ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಸುವಲ್ಲಿ ಸಫಲರಾಗುತ್ತೀರಿ. ರಕ್ತಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಆತುರದ ನಿರ್ಧಾರ ಸಲ್ಲದು.