
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ,
ಕೃಷ್ಣಪಕ್ಷ. ವಾರ:ಸೋಮವಾರ,
ತಿಥಿ :ಅಮಾವಾಸ್ಯೆ, ನಕ್ಷತ್ರ:ಜೇಷ್ಠ,
ರಾಹುಕಾಲ:8.00 ರಿಂದ 9.26
ಗುಳಿಕಕಾಲ:1.43 ರಿಂದ 3.09
ಯಮಗಂಡಕಾಲ:10.52 ರಿಂದ 12.18
ಮೇಷ
ಮಧ್ಯವರ್ತಿಗಳಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಪ್ರಗತಿಯ ಬಗೆಗೆ ಮಾನಸಿಕ ದುಗುಡ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು.
ವೃಷಭ
ಸೈನಿಕರು, ಆರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸಂತೋಷದ ದಿನ. ಜೀವನದಲ್ಲಿ ಸಾಧನೆಯ ಆತ್ಮತೃಪ್ತಿಯನ್ನು ಹೊಂದಲಿದ್ದೀರಿ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ.
ಮಿಥುನ
ಆರ್ಥಿಕ ಲಾಭವನ್ನು ಹೊಂದುವ ದಿನ. ಶುಭಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿ ಮಾಡುವ ಅಥವಾ ಲಾಭವಾಗುವ ಸಾಧ್ಯತೆ. ಮಾನಸಿಕವಾಗಿ ತೊಳಲಾಟ.
ಕಟಕ
ಕಲಾವಿದರಿಗೆ ಸಮಾಧಾನಕರ ದಿನ. ಸಾಮಾಜಿಕ ಗೌರವ ಪ್ರಾಪ್ತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸಾಂಸಾರಿಕವಾಗಿ ಸಮಾಧಾನ. ದೇವತಾ ದರ್ಶನ ಭಾಗ್ಯ.
ಸಿಂಹ
ಕಾರ್ಯ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳತೆ ಮೂಡಿಬರಲಿದೆ. ಮಿತ್ರ ವೃಂದದವರಿಂದ ಶುಭವಾರ್ತೆ ಕೇಳಿಬರಲಿದೆ. ಮಿತವ್ಯಯ ಮಾಡುವಿರಿ. ಆರ್ಥಿಕವಾಗಿ ಸಬಲರಾಗುವಿರಿ.
ಕನ್ಯಾ
ಮನಸ್ಸಿನಲ್ಲಿ ಗೊಂದಲಕರ ವಾತಾವರಣ. ಸಮಾಧಾನಕರ ನಡವಳಿಕೆಯಿಂದಾಗಿ ಸಂಸಾರದಲ್ಲಿ ಸಂತಸ. ಮಕ್ಕಳಿಂದ ಸಂತೋಷ ಸುದ್ದಿಯನ್ನು ಕೇಳಲಿದ್ದೀರಿ. ದೃಢ ನಿರ್ಧಾರವಿರಲಿ.
ತುಲಾ
ವಿವಾಹಾಪೇಕ್ಷಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಶ್ರಮವಹಿಸುವುದು ಅಗತ್ಯ. ಸಾಲದಿಂದ ಮುಕ್ತಿ. ಹೆಣ್ಣುಮಕ್ಕಳಿಗೆ ಮಾನಸಿಕ ಗೊಂದಲದ ದಿನವಾಗಲಿದೆ.
ವೃಶ್ಚಿಕ
ಹಮ್ಮಿಕೊಂಡ ಮಹತ್ತರ ಕೆಲಸದಲ್ಲಿ ಪ್ರಯತ್ನಪೂರಕವಾದ ಸಫಲತೆ ಸಿಗುವುದು. ಕಾರ್ಖಾನೆ ಕೆಲಸಗಾರರಿಗೆ ಸಮಾಧಾನಕರ ದಿನ. ತಂದೆತಾಯಿಗಳಿಂದ ಪ್ರೋತ್ಸಾಹ.
ಧನು
ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ. ತೈಲ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ನೆರವಿನಿಂದಾಗಿ ಸಂತೋಷದ ವಾತಾವರಣ.
ಮಕರ
ರಾಜಕಾರಣಿಗಳಿಗೆ ಒತ್ತಡದ ದಿನ. ಉನ್ನತ ಸ್ಥಾನಕ್ಕಾಗಿ ಸೆಣಸಾಟದ ಬದುಕು. ಪ್ರಭಾವಿಗಳ ಸಂಪರ್ಕಕ್ಕಾಗಿ ವಿಪರೀತ ಅಲೆದಾಟ. ಸಾರ್ವಜನಿಕ ರಂಗದಲ್ಲಿ ಪುರಸ್ಕಾರ. ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ.
ಕುಂಭ
ಔಷಧ ತಯಾರಿಕೆ, ವೈದ್ಯಕೀಯ ಉದ್ಯೋಗದಲ್ಲಿ ರಂಗದಲ್ಲಿರುವವರಿಗೆ ಯಶಸ್ಸು. ಬಹುದಿನಗಳ ನಂತರ ಬಂಧುಗಳೊಬ್ಬರ ಭೇಟಿ ಸಾಧ್ಯತೆ. ಕುಟುಂಬ ಸಂಬಂಧ ಕಲಹದಿಂದ ಮುಕ್ತಿ.
ಮೀನ
ಮಹಿಳೆಯರ ಆಕಾಂಕ್ಷೆಗಳಿಗೆ ಪ್ರೋತ್ಸಾಹ ದೊರಕಲಿದೆ. ಕಾರ್ಯನೈಪುಣ್ಯತೆಯಿಂದಾಗಿ ಸ್ನೇಹಿತರ ನಡುವೆ ಗೌರವಕ್ಕೆ ಪಾತ್ರರಾಗಲಿದ್ದೀರಿ. ಉದ್ಯೋಗ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ.