Design a site like this with WordPress.com
Get started

ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ.
ವಾರ : ಭಾನುವಾರ, ತಿಥಿ : ಚತುರ್ದಶಿ,
ನಕ್ಷತ್ರ : ಅನುರಾಧ,
ರಾಹುಕಾಲ: 4.35 ರಿಂದ 6.00
ಗುಳಿಕಕಾಲ: 3.09 ರಿಂದ 4.35
ಯಮಗಂಡಕಾಲ: 12.18 ರಿಂದ 1.43

ಮೇಷ

ಅನಿರೀಕ್ಷಿತ ಧನಾಗಮನದ ಸಾಧ್ಯತೆಯು ಕಂಡುಬರುತ್ತಿದೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮಾನಸಿಕ ನೆಮ್ಮದಿಯು ನಿಮ್ಮದಾಗಲಿದೆ.

ವೃಷಭ

ಕೆಲಸದಲ್ಲಿ ಗೌರವ, ಮನ್ನಣೆಯನ್ನು ಹೊಂದಲಿದ್ದೀರಿ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಆಪ್ತರೊಬ್ಬರ ಭೇಟಿಯ ಸಾಧ್ಯತೆ ಕಂಡುಬರುವುದು. ಸಂತಸದ ವಾತಾವರಣ ನೆಲೆಸಲಿದೆ.

ಮಿಥುನ

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಲಿದೆ. ನೆನೆದ ಕಾರ್ಯಗಳು ಸಿದ್ಧಿಯಾಗುವ ದಿನವಾಗಿದೆ. ಸಹೋದರರಿಗೆ ಅಪಘಾತದ ಬಗ್ಗೆ ಎಚ್ಚರಿಕೆ ಅಗತ್ಯ. ದೇವತಾರಾಧನೆಯಿಂದಾಗಿ ಸ್ವಾಭಿಮಾನ ಕಾಪಾಡಿಕೊಳ್ಳಬಹುದು.

ಕಟಕ

ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ಆರ್ಥಿಕ ಸ್ಥಿತಿ ಎಂದಿನಂತೆ ಮುಂದುವರಿಯಲಿದೆ. ದೇಹಾಲಸ್ಯದಿಂದಾಗಿ ಕೆಲಸಗಳಲ್ಲಿ ನಿರುತ್ಸಾಹ

ಸಿಂಹ

ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದಾದರೂ ವಿಷ ಜಂತುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಒಳಿತು. ವಿನಾಕಾರಣ ಅಧಿಕ ಖರ್ಚು ಸಂಭವಿಸುವ ಸಾಧ್ಯತೆ ಕಂಡುಬರುವುದು. ವ್ಯಯದ ಮೇಲೆ ಹಿಡಿತವಿರಲಿ.

ಕನ್ಯಾ

ಕೆಲಸದಲ್ಲಿ ಕಿರಿಕಿರಿಯುಂಟಾಗಲಿದೆ. ಯಾರಮೇಲೂ ಅತಿಯಾದ ನಂಬಿಕೆ ಸಲ್ಲದು. ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ಪರಿಹಾರ ವಾಗಲಿವೆ. ಮನೆ ಮಂದಿಯೊAದಿಗೆ ದೂರದ ಬಂಧುಗಳ ದರ್ಶನ ಯೋಗ ಕಂಡುಬರುತ್ತಿದೆ.

ತುಲಾ

ಸಾಹಿತಿ, ಬರಹಗಾರರಿಗೆ ಶುಭದಾಯಕವಾದ ದಿನವಾಗಿರುವುದು. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಗೊಂದಲ ಉಂಟಾಗಬಹುದು. ಆಯ್ಕೆಯ ಮೂಲಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡಲ್ಲಿ ಸಫಲತೆ ಕಾಣುವಿರಿ.

ವೃಶ್ಚಿಕ

ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಕಂಡುಬರಲಿದೆ.

ಧನು

ಕೋರ್ಟ್ ಕಛೇರಿಗೆ ಸಂಬAಧಿಸಿದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರು ಆರೋಗ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕ ವಾತಾವರಣ ಮೂಡಿಬರಲಿದೆ. ನೆಮ್ಮದಿಯನ್ನು ಕಾಣುವಿರಿ.

ಮಕರ

ಆರಕ್ಷಕರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು, ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಉತ್ತಮ ಆರೋಗ್ಯ ಭಾಗ್ಯ. ನವವಿವಾಹಿತರಿಗೆ ಅತಿಯಾದ ಪ್ರವಾಸದಿಂದಾಗಿ ಆಯಾಸ.

ಕುಂಭ

ಮನೆಯ ನಿರ್ಮಾಣ ಹಾಗೂ ಇತರ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ವಾಹನ ಖರೀದಿಗಾಗಿ ಪ್ರಶಸ್ಥದಿನವಾಗಿರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಬಿರುಕು ವಾ ತೊಂದರೆಗಳು ತಲೆದೋರುವ ಸಾಧ್ಯತೆ.

ಮೀನ

ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬAದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ ಮೂಡಲಿದೆ. ಕಾರ್ಯಬಾಹುಳ್ಯದಿಂದಾಗಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುವುದು. ಸಂಗಾತಿಯ ಸಾಂತ್ವನದ ಮಾತುಗಳಿಂದಾಗಿ ಸಮಾಧಾನ ನೆಲೆಸಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: