
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕಮಾಸ, ಕೃಷ್ಣಪಕ್ಷ,
ಏಕಾದಶಿ / ದ್ವಾದಶಿ, ಶುಕ್ರವಾರ,
ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ,
ರಾಹುಕಾಲ 10 :50ರಿಂದ 12 :16
ಗುಳಿಕಕಾಲ 07:58 ರಿಂದ 09:24
ಯಮಗಂಡಕಾಲ 03:08 ರಿಂದ 04:34
ಮೇಷ
ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಮನೆಮಂದಿಯೊಂದಿಗೆ ದೇವತಾ ದರ್ಶನ ಭಾಗ್ಯ.
ವೃಷಭ
ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ವಸ್ತುಗಳನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಚರ ಆಸ್ತಿಗಳ ಖರೀದಿ ಮಾಡಲಿದ್ದೀರಿ. ದೇವತಾಕಾರ್ಯಗಳಲ್ಲಿ ತೊಡಗಿಸಿಕೊಂಡು ನೆಮ್ಮದಿ.
ಮಿಥುನ
ಆಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ. ವಾಹನ ರಿಪೇರಿ, ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚಿನ ಆದಾಯ. ಕಾನೂನಿಗೆ ಸಂಬಂಧಿಸಿದ ವಿಷಯದಲ್ಲಿ ಸೂಕ್ತ ಸಲಹೆ ಪಡೆದು ಮುಂದಡಿ ಇಡಿ.
ಕಟಕ
ನಿತ್ಯದ ಕೆಲಸಗಳಲ್ಲದೇ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ನೆಮ್ಮದಿಯ ವಾತಾವರಣಕ್ಕೆ ಕಾರಣರಾಗಲಿದ್ದೀರಿ. ಮನೆಯವರೊಂದಿಗೆ ಆತುರದ ವ್ಯವಹಾರ ತೋರುವುದು ತರವಲ್ಲ.
ಸಿಂಹ
ಕ್ರೀಡಾಪಟುಗಳಿಗೆ ಉತ್ತೇಜನ ದೊರಕುವ ಸಂಭವವಿದ್ದು ಉತ್ತಮ ಸಾಧನೆ ತೋರಲಿದ್ದೀರಿ. ವಿಪರೀತ ಅನಾವಶ್ಯಕ ಮಾತುಗಳಿಂದಾಗಿ ಕೆಲಸ ಕೆಡುವ ಸಾಧ್ಯತೆ. ವಾಹನ ವ್ಯವಹಾರಗಳಿಂದ ವಿಶೇಷ ಲಾಭ ಗಳಿಸಲಿದ್ದೀರಿ.
ಕನ್ಯಾ
ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನಿಮ್ಮದಾಗಲಿದೆ. ವಿವಾಹಾದಿ ಶುಭಕಾರ್ಯಗಳಲ್ಲಿ ಮನೆಯವರೊಂದಿಗೆ ಸಕ್ರಿಯ ಭಾಗಿಯಾಗುವಿರಿ.
ತುಲಾ
ವರಮಾನದಲ್ಲಿ ಗಣನೀಯ ಸುಧಾರಣೆ. ವಿದೇಶದಿಂದ ಮಕ್ಕಳ ಅಥವಾ ಸಮೀಪ ಬಂಧುಗಳ ಆಗಮನಕ್ಕಾಗಿ ಎದುರು ನೋಡುವಿರಿ. ಗೃಹಾಲಂಕಾರ ವಸ್ತುಗಳ ಖರೀದಿ ಅಥವಾ ನವೀಕರಣ ಸಾಧ್ಯತೆ.
ವೃಶ್ಚಿಕ
ಬರವಣಿಗೆ ಸಾಹಿತ್ಯ ಅಥವಾ ಅನುವಾದಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಮನೆಯ ಕೆಲಸ–ಕಾರ್ಯಗಳ ಜವಾಬ್ದಾರಿಯಿಂದ ಮುಕ್ತರಾಗಿ ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ.
ಧನು
ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ. ಶ್ರೀಮಂತ ಜೀವನದ ಶೈಲಿಗಾಗಿ ವೆಚ್ಚ ಭರಿಸಲಿದ್ದೀರಿ. ಸೋದರಿಯರ ವಿಚಾರದಲ್ಲಿ ಧಾರಾಳತನ ತೋರಲಿದ್ದೀರಿ.
ಮಕರ
ಸಾಹಿತ್ಯ, ಸಂಗೀತ, ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳೊಡನಾಟ ದಿನವಿಡೀ ದೊರಕುವ ಸಾಧ್ಯತೆ. ರಿಯಲ್ ಎಸ್ಟೇಟ್ನಂತಹ ಭೂ ಸಂಬಂಧಿ ವ್ಯವಹಾರಗಳಲ್ಲಿ ಅಧಿಕ ಲಾಭ. ಕೆಲಸಗಾರರ ಬಗ್ಗೆ ವಿಶ್ವಾಸವಿರಲಿ.
ಕುಂಭ
ಮನೆಯಲ್ಲಿ ಸಂತೋಷದ ವಾತಾವರಣ. ಆದಾಯದಲ್ಲಿ ಹೆಚ್ಚಳ. ದಾಂಪತ್ಯ ಜೀವನ ಸುಖಕರವಾಗಿರುವುದು. ಸರ್ಕಾರಿ ನೌಕರರಿಗೆ ಬಿಡುವಿನ ದಿನವಾಗಿದ್ದರೂ, ಉನ್ನತ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ.
ಮೀನ
ಮನೆಯಲ್ಲಿ ಮೃದುಭಾಷಿಯಾಗಿ ವ್ಯವಹರಿಸಿ. ಕೆಲಸಗಳು ನಿಧಾನಗತಿಯಲ್ಲಿದ್ದರೂ ಮನಸ್ಸಿನಲ್ಲಿನ ದುಗುಡವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ದೂರದ ಸಂಬಂಧಿಕರೊಬ್ಬರ ಆಗಮನ ಸಾಧ್ಯತೆ.