
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣಪಕ್ಷ
ವಾರ: ಬುಧವಾರ, ತಿಥಿ: ನವಮಿ,
ನಕ್ಷತ್ರ: ಉತ್ತರ,
ರಾಹು ಕಾಲ: 12.16 ರಿಂದ 1.42
ಗುಳಿಕ ಕಾಲ: 10.50 ರಿಂದ 12.16
ಯಮಗಂಡ ಕಾಲ: 7.58 ರಿಂದ 9.24.
ಮೇಷ
ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರಕುವ ಸಾಧ್ಯತೆ. ವಿವಾಹ ನಿಶ್ಚಯ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.
ವೃಷಭ
ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ವಿಶೇಷ ಬೇಡಿಕೆಯಿಂದಾಗಿ ಉತ್ತಮ ಲಾಭ. ಸ್ವಂತ ಉದ್ಯಮ, ಕಾರ್ಖಾನೆಗಳನ್ನು ನಡೆಸುತ್ತಿರುವವರಿಗೆ ಉತ್ತಮ ಆದಾಯ.
ಮಿಥುನ
ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ. ವಾಹನ ಮಾರಾಟದಿಂದ ಉತ್ತಮ ಲಾಭ. ಕಾರ್ಯಕ್ರಮಗಳ ಒತ್ತಡ – ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ. ಸಮಾಧಾನಚಿತ್ತರಾಗಿ ವ್ಯವಹರಿಸಿ.
ಕಟಕ
ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರ್ಕಾರದ ಕಾಮಗಾರಿಗಳು ದೊರೆತು ಸಂತಸ. ಮಂಗಳಕಾರ್ಯಗಳಿಗಾಗಿ ಮಕ್ಕಳೊಂದಿಗೆ ಚರ್ಚಿಸುವ ಸಾಧ್ಯತೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ.
ಸಿಂಹ
ಸರ್ಕಾರಿ ಕೆಲಸಗಳಲ್ಲಿರುವವರಿಗೆ ಬಡ್ತಿ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ.
ಕನ್ಯಾ
ಕೈಗೊಂಡ ಕೆಲಸ–ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನವ ದಂಪತಿಗಳಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ.
ತುಲಾ
ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟದಿಂದಾಗಿ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ. ಶುಭಕಾರ್ಯಗಳನ್ನು ನಡೆಸುವ ಬಗ್ಗೆ ಚಿಂತನೆ.
ವೃಶ್ಚಿಕ
ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ವರಮಾನ. ಹೊಸ ಗೃಹನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನಕರವಾಗಿ ಕೆಲಸಗಳನ್ನು ನಿರ್ವಹಿಸಿ ತೊಂದರೆಯಿಂದ ಪಾರಾಗಲಿದ್ದೀರಿ.
ಧನು
ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದಾಗಿ ಕೃಷಿ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ.
ಮಕರ
ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ ನಡೆಸಲು ಸಕಾಲ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂ ವಿಸ್ತರಿಸಲು ಅನುಮತಿಯನ್ನು ಪಡೆಯಲಿದ್ದೀರಿ. ಮಕ್ಕಳ ವಿಶೇಷ ಸಾಧನೆಯ ಸಾಧ್ಯತೆ ಇದ್ದು ಸಂತಸ.
ಕುಂಭ
ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ ದೊರಕಲಿದೆ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ ದೊರೆಯಲಿದೆ. ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ.
ಮೀನ
ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದಾಗಿ ಹೇರಳ ಲಾಭ. ಮಂಗಳಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.