
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ ಹಸ್ತ ನಕ್ಷತ್ರ,
ರಾಹುಕಾಲ: ಸಂಜೆ 5:09 ರಿಂದ 6:44
ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:09
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 2:00
ಮೇಷ
ವ್ಯವಹಾರಗಳು ಅಡೆತಡೆ ಇಲ್ಲದೆ ನಡೆಯುವುದು. ಮಧ್ಯವರ್ತಿಗಳ ಸಹಾಯದಿಂದ ವಿವಾಹ ಸಂಬಂಧ ಕೆಲಸ ಕಾರ್ಯಗಳು ಸಸೂತ್ರವಾಗಿ ನೆರವೇರುವವು. ಬಂಧುಗಳ ಆಗಮನ ಸಾಧ್ಯತೆ.
ವೃಷಭ
ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಹೊಸ ಉದ್ಯಮ ಸ್ಥಾಪನೆಗೆ ಸಕಾಲವಿದು. ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಗೊಂದಲ ಸೃಷ್ಟಿಯಾಗುವುದು.
ಮಿಥುನ
ಕಾರ್ಯ ನೈಪುಣ್ಯತೆಯಿಂದ ಪ್ರಶಂಸೆಗೆ ಭಾಜನರಾಗುವಿರಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಆರೋಗ್ಯದಲ್ಲಿ ತೊಂದರೆ. ಸಹೋದ್ಯೋಗಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆ. ಗಣಪತಿಯ ಆರಾಧನೆ ಮಾಡಿ.
ಕಟಕ
ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಾಣುವಿರಿ. ಕಳೆದುಹೋದುದನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಸೌಜನ್ಯದಿಂದ ಘನತೆ ಗೌರವಗಳನ್ನು ಪಡೆಯುವಿರಿ. ಸಂಗಾತಿಯ ಸಹಕಾರ ದೊರೆಯಲಿದೆ.
ಸಿಂಹ
ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ನಿರ್ಲಕ್ಷಿಸದೆ ಶ್ರದ್ಧೆಯಿಂದ ನಿರ್ವಹಿಸಿ. ಅನುಭವಿಗಳಿಂದ ಸಹಾಯ ದೊರಕಲಿದೆ. ಸೋಗಲಾಡಿತನದಿಂದಾಗಿ ಇಕ್ಕಟ್ಟಿಕೆ ಸಿಲುಕುವ ಸಾಧ್ಯತೆ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ.
ಕನ್ಯಾ
ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ವಿಶೇಷ ಸಾಧನೆ ಮಾಡುವ ಸಾಧ್ಯತೆ ಕಂಡುಬರುತ್ತದೆ. ಸಂಶೋಧಕರು, ವಿಜ್ಞಾನಿಗಳಿಗೆ ಹೊಸ ವಿಷಯದ ಬಗ್ಗೆ ಹೊಳವು ದೊರಕುವ ಸಾಧ್ಯತೆಗಳು ಇವೆ.
ತುಲಾ
ಗಂಭೀರ ವಿಷಯಗಳಲ್ಲಿ ಜಾಗರೂಕರಾಗಿ ವ್ಯವಹರಿಸಿ. ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನಿಮ್ಮ ನೈಪುಣ್ಯತೆಯನ್ನು ಉಪಯೋಗಿಸಿ. ಕಾರ್ಯನಿಮಿತ್ತ ದೂರ ಪ್ರಯಾಣದ ಸಾಧ್ಯತೆ.
ವೃಶ್ಚಿಕ
ವದಂತಿಗಳಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲ ಆಪಾದನೆಗಳಿಂದ ಮುಕ್ತರಾಗುವಿರಿ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಸಕಾಲಿಕ ಸಲಹೆಗಳು ದೊರೆಯುವವು. ಮಕ್ಕಳ ಬಗ್ಗೆ ಕಾಳಜಿ ಅವಶ್ಯಕ.
ಧನು
ನಿಮ್ಮ ನೈತಿಕ ಬಲದಿಂದಾಗಿ ಸುತ್ತಮುತ್ತಲೂ ಉತ್ತಮ ವಾತಾವರಣ ಸೃಷ್ಟಿ ಮಾಡುವಿರಿ. ಸಾರ್ವಜನಿಕವಾಗಿ ಪ್ರಶಂಸೆಗಳು ಕೇಳಿಬರಲಿವೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಮೂಡುವುದು.
ಮಕರ
ಎಣ್ಣೆ, ಹಾಲು ಮುಂತಾದ ದ್ರವ ವ್ಯಾಪಾರಿಗಳಿಗೆ ಲಾಭದ ನಿರೀಕ್ಷೆ. ಸಮಚಿತ್ತದಿಂದ ವರ್ತಮಾನದ ವಿಷಯಗಳನ್ನು ಅವಲೋಕಿಸಿ. ಹಣಕಾಸಿನ ಸಹಾಯ ದೊರಕುವುದು. ಪರರಿಂದ ಸಹಾಯ ದೊರಕುವುದು.
ಕುಂಭ
ಕಲಾವಿದರಿಗೆ ಉತ್ತಮ ಪ್ರಶಂಸೆ. ಅರ್ಥಪೂರ್ಣ ವಿಚಾರ ವಿನಿಮಯಗಳಲ್ಲಿ ಭಾಗಿಯಾಗುವಿರಿ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಮ್ಮಡಿಗೊಂಡು ಯಶಸ್ಸನ್ನು ಸಾಧಿಸುವಿರಿ. ಹೆರವರ ಕಷ್ಟಗಳಲ್ಲಿ ಭಾಗಿಯಾಗುವ ಸಾಧ್ಯತೆ.
ಮೀನ
ಎಚ್ಚರಿಕೆಯ ವ್ಯವಹಾರದಿಂದಾಗಿ ಉತ್ತಮ ಲಾಭ ಪಡೆಯುವಿರಿ. ಜಾಣ್ಮೆಯಿಂದ ಕೂಡಿದ ದಕ್ಷತೆಯಿಂದಾಗಿ ಕೆಲಸ ಕಾರ್ಯಗಳು ಸುಗಮವಾಗುವವು. ಆಪ್ತರಿಂದ ಸಮಾಧಾನ.