Design a site like this with WordPress.com
Get started

ಜುಲೈ 25′ 2020; ಶನಿವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಮಧ್ಯಾಹ್ನ 12:0 ನಂತರ ಷಷ್ಠಿ ತಿಥಿ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 2:19 ನಂರ ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:19 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:08 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:40

ಮೇಷ

ಚೋರ ಭಯದ ನಿಮಿತ್ತ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮಿತ್ರರೊಂದಿಗೆ ಮನಸ್ತಾಪ ಸಾಧ್ಯತೆ. ಸಂಗಾತಿಯಿಂದ ವಿಶೇಷ ಕೊಡುಗೆ ಪ್ರಾಪ್ತಿ. ಬಂಧುಗಳ ಆಗಮನದಿಂದ ಸಂತಸದ ವಾತಾವರಣ.

ವೃಷಭ

ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಬಂಧು ವರ್ಗದವರಿಂದ ಸಂತಸದ ಸುದ್ದಿ ನಿರೀಕ್ಷಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬದಲಾವಣೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ

ದಿನದ ಮಟ್ಟಿಗೆ ಎಲ್ಲ ವಿಧಗಳಲ್ಲೂ ಸ್ವಲ್ಪಮಟ್ಟಿನ ಕಷ್ಟ ನಷ್ಟ ಅನುಭವಿಸುವ ಸಾಧ್ಯತೆ. ಅಪಾಯಕಾರಿ ಕೆಲಸ ಮತ್ತು ವಾಹನಗಳಿಂದ ದೂರವಿರುವುದು ಒಳಿತು. ಗುರು ಗಣಪತಿಯ ಆರಾಧನೆಯಿಂದ ಅನುಕೂಲ.

ಕಟಕ

ನಿಮ್ಮ ಎಲ್ಲ ಕೆಲಸ–ಕಾರ್ಯಗಳು ಸುಗಮವಾಗಿ ಕೈಗೂಡಲಿವೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮವಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರುವುದು. ವ್ಯಾಪಾರಸ್ಥರಿಗೆ ಉತ್ತಮ ಲಾಭ ಗಳಿಕೆ.

ಸಿಂಹ

ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ. ವಿದ್ಯಾರ್ಥಿಗಳಿಗೆ ನಿರಾಳತೆ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ. ವಕೀಲ ವೃತ್ತಿಯಲ್ಲಿರುವವರಿಗೆ ಆರ್ಥಿಕಾಭಿವೃದ್ದಿ. ವಾಹನ ಖರೀದಿ ಯೋಗ.

ಕನ್ಯಾ

ಹಿರಿಯರಿಂದ ಬಳುವಳಿಯಾಗಿ ಸಂಪತ್ತು ಸಿಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲಗಳು ಗೋಚರವಾಗಲಿವೆ. ಕುಟುಂಬವರ್ಗದವರಿಂದ ಸ್ಥಾನಮಾನಗಳು ಲಭ್ಯವಾಗುವವು.

ತುಲಾ

ಸ್ಥಿರಾಸ್ತಿ ಪ್ರಾಪ್ತವಾಗುವ ಸಾಧ್ಯತೆಯಿದ್ದು, ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆ. ಹೊಸ ಮನೆ, ಸಂತಾನ ಭಾಗ್ಯ ಮುಂತಾದವುಗಳು ದೊರಕಿ ಸಂತಸ.

ವೃಶ್ಚಿಕ

ಭೂ ವ್ಯವಹಾರದಲ್ಲಿ ಅಧಿಕ ಲಾಭದ ನಿರೀಕ್ಷೆ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತವಾಗುವ ಸಾಧ್ಯತೆ. ನೀಡಿದ ಸಾಲಗಳು ಮರುಪಾವತಿಯಾಗುವವು.

ಧನು

ಕೋರ್ಟ್, ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಹೊಸ ಮನೆ, ಜಮೀನು ಪ್ರಾಪ್ತವಾಗುವ ಯೋಗ. ಸಾಂಸಾರಿಕ ಸುಖ ಅನುಭವಿಸಲಿದ್ದೀರಿ. ಕೃಷಿ ಬದುಕಿನವರಿಗೆ ಸ್ವಲ್ಪ ಮಟ್ಟಿನ ಬಿಡುವು ದೊರೆಯುವುದು.

ಮಕರ

ಭೂ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲಮಯ ಪರಿಸ್ಥಿತಿ ನಿರ್ಮಾಣ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ. ಸಂಗಾತಿಯಿಂದ ಸಿಹಿ ಸುದ್ದಿ.

ಕುಂಭ

ಸಂದುನೋವು, ಬೆನ್ನುನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಬರಲಿರುವ ಅವಘಡವನ್ನು ತಪ್ಪಿಸಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರುವುದು.

ಮೀನ

ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರ ವಾತಾವರಣ. ಮದುವೆ ಮುಂಜಿ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಬಂಧು ಬಾಂಧವರ ಸಮಾಗಮ. ನವ ಚೈತನ್ಯ ಧುಮ್ಮಿಕ್ಕಲಿದೆ. ಮಕ್ಕಳ ವಿಷಯದಲ್ಲಿ ಗಮನವಿರಲಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: