
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:17 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:06 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41
ಮೇಷ
ರಾಜಕೀಯಕ್ಕೆ ಸೇರುವಂತೆ ಒತ್ತಡ. ವೈಯಕ್ತಿಕ ಬದುಕಿನಲ್ಲಿ ಸ್ವಲ್ಪಮಟ್ಟಿನ ಏರುಪೇರು ಕಂಡಬಂದರೂ ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹದ ನುಡಿಗಳಿಂದಾಗಿ ಉತ್ಸಾಹ ಮೂಡಲಿದೆ.
ವೃಷಭ
ಸ್ವಯಂ ಉದ್ಯೋಗದಲ್ಲಿ ಹೊಸತನ ಮೂಡಿ ಬರಲಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಹೊಸ ವಸ್ತುಗಳ ಖರೀದಿಗೆ ಸೂಕ್ತ ಕಾಲ. ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸಂಸಾರದಲ್ಲಿ ಸಂತೃಪ್ತಿ.
ಮಿಥುನ
ನೂತನ ಉದ್ಯಮದಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಕೌಟುಂಬಿಕ ಸಮಸ್ಯೆಗಳು ದೂರವಾಗಿ ನೆಮ್ಮದಿ. ಕೃಷಿಕರಿಗೆ ಕೆಲಸ–ಕಾರ್ಯಗಳಿಗೆ ಅನುಕೂಲಗಳು ಕೂಡಿಬರಲಿವೆ.
ಕಟಕ
ಉನ್ನತ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ದೊರೆತು ಉತ್ಸಾಹ ಇಮ್ಮಡಿಗೊಳ್ಳಲಿದೆ. ಮನೆಯಲ್ಲಿ ಸಂತೋಷದ ವಾತಾವರಣ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ.
ಸಿಂಹ
ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ. ವಿದ್ಯಾರ್ಥಿಗಳಿಗೆ ಅತಿಯಾದ ಶ್ರಮ ಬಯಸುವ ದಿನವಾಗಲಿದೆ. ತಾಯಿಯ ಮಾತುಗಳ ಮೇಲೆ ವಿಶ್ವಾಸವಿರಲಿ. ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆ.
ಕನ್ಯಾ
ಧಾನ್ಯ ದಿನಸಿ ವ್ಯಾಪಾರಿಗಳಿಗೆ ವ್ಯಪಾರದಲ್ಲಿ ಅನಾನುಕೂಲ. ಅಪರೂಪದ ವ್ಯಕ್ತಿಗಳ ಆಗಮನದಿಂದ ಮನೆಯಲ್ಲಿ ಸಂತಸ. ಆತ್ಮೀಯರೊಂದಿಗೆ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ.
ತುಲಾ
ಇತರರ ಅಭಿವೃದ್ಧಿಯು ನಿಮ್ಮ ನಿದ್ದೆಗೆಡಿಸುವ ಸಾಧ್ಯತೆ. ಧನ ಧಾನ್ಯಗಳ ಸಂಗ್ರಹದಲ್ಲಿ ಹಿನ್ನಡೆ. ಕ್ರೀಡಾಪಟುಗಳಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ದೊರಕುವುದು. ಆಸ್ತಿ ಖರೀದಿ ವಿಚಾರದಲ್ಲಿ ಚಿಂತನೆ ನಡೆಸಲಿದ್ದೀರಿ.
ವೃಶ್ಚಿಕ
ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿಯ ಸಾಧ್ಯತೆ. ವಿವಾಹದ ಮಾತುಕತೆ ನಡೆಸುವ ಸಾಧ್ಯತೆ. ಹಣ್ಣು ಮತ್ತು ತರಕಾರಿ, ದಿನಸಿ ಪದಾರ್ಥಗಳ ವ್ಯಾಪಾರದಿಂದ ಲಾಭ. ಅಮೂಲ್ಯ ವಸ್ತುಗಳು ಪ್ರಾಪ್ತವಾಗುವ ಸಾಧ್ಯತೆ.
ಧನು
ಓದಿನಲ್ಲಿ ಏಕಾಗ್ರತೆ ಅವಶ್ಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ವಿಚಾರವೊಂದರ ಬಗ್ಗೆ ಚಿಂತನೆ ನಡೆಸುವಿರಿ. ಸ್ನೇಹಿತರೊಂದಿಗೆ ದೇವತಾ ದರ್ಶನ ಭಾಗ್ಯ. ಆರ್ಥಿಕ ಸಬಲತೆ ಕಂಡುಬರುವುದು.
ಮಕರ
ಹಿರಿಯರ ಸಲಹೆಗಳಿಗೆ ಗೌರವವಿರಲಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಕೃಷಿಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ. ಅನಾವಶ್ಯಕ ಸುತ್ತಾಟದಿಂದಾಗಿ ಮನಸ್ಸಿನ ನೆಮ್ಮದಿ ಹಾಳಾಗುವ ಸಾಧ್ಯತೆ.
ಕುಂಭ
ಕೌಟುಂಬಿಕ ಭಿನ್ನಾಭಿಪ್ರಾಯಗಳು ದೂರವಾಗುವವು. ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ. ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ. ದೈನಂದಿನ ಕಾರ್ಯಗಳಲ್ಲಿ ಉತ್ಸುಕತೆ ಮೂಡಲಿದೆ.
ಮೀನ
ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಕಂಡರೂ ಸಾಮಾಜಿಕ ಕಳಂಕದ ಭೀತಿ ಇದೆ. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಧಾನ್ಯ ವ್ಯಾಪಾರದಲ್ಲಿ ಉತ್ತಮ ಪ್ರಗತಿ.