
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಬುಧವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16
ಮೇಷ
ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿ ಖರೀದಿ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸ ಕುರಿತು ಚಿಂತನೆ ನಡೆಸಲಿದ್ದೀರಿ. ವಿದೇಶಿ ವ್ಯಾಪಾರದ ಬಗ್ಗೆ ಮರುಚಿಂತನೆ ನಡೆಸುವುದು ಉತ್ತಮ.
ವೃಷಭ
ಯೋಜನೆಯೊಂದರ ಪೂರ್ಣತೆಗಾಗಿ ನಿಮ್ಮ ಸಂಪೂರ್ಣ ಶಕ್ತಿಯುಕ್ತಿಗಳನ್ನು ವ್ಯಯಿಸಲಿದ್ದೀರಿ. ಯೋಜನೆಯಲ್ಲಿನ ಸುಧಾರಣೆಗೆ ಅನ್ಯರ ಸಹಕಾರವೂ ದೊರಕಲಿದೆ. ಕಠಿಣ ಕಾರ್ಯವೊಂದನ್ನು ಮಾಡಲಿದ್ದೀರಿ.
ಮಿಥುನ
ಬೇದಭಾವಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ದಿಟ್ಟ ನಡೆಯನ್ನು ಅನುಸರಿಸಲಿದ್ದೀರಿ. ಹೊಸ ನೀತಿಯಿಂದಾಗಿ ವಿಶಿಷ್ಟ ಕಾರ್ಯವೊಂದನ್ನು ಕೈಗೆತ್ತಿಕೊಳ್ಳುವಿರಿ. ಉತ್ತಮ ಯೋಜನೆಗಳನ್ನು ರೂಪಿಸಲಿದ್ದೀರಿ.
ಕಟಕ
ವಿವಿಧ ಮೂಲಗಳಿಂದ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಕೆಲಸ–ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುವವು. ಉದ್ಯೋಗಸ್ಥರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು.
ಸಿಂಹ
ಸ್ನೇಹಿತರ ಸಹಕಾರವನ್ನು ಸಂಪೂರ್ಣ ಬಳಸಿಕೊಂಡು ಲಾಭವನ್ನು ಹೊಂದಲಿದ್ದೀರಿ. ಆಸ್ತಿ ಖರೀದಿ ವಿಚಾರವಾಗಿ ಮಾತುಕತೆಯಲ್ಲಿ ಭಾಗಿಯಾಗುವ ಲಕ್ಷಣಗಳು ಕಾಣುತ್ತಿವೆ.
ಕನ್ಯಾ
ನಿಮ್ಮ ಬಗೆಗಿನ ಅನುಮಾನಗಳು ದೂರವಾಗಲಿವೆ. ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ. ಆಶ್ಚರ್ಯಕರ ಸಂಗತಿಯೊಂದು ಘಟಿಸಲಿದೆ. ಆರೋಗ್ಯದಲ್ಲಿ ಸುಧಾರಣೆ.
ತುಲಾ
ಕೆಲಸ–ಕಾರ್ಯಗಳು ಸುಗಮವಾಗಿ ಸಾಗಲಿವೆ. ಸಂಬಂಧಿಕರಿಂದ ನಿಮ್ಮ ದರ್ಪದ ನಡೆಗಳಿಗೆ ಕಡಿವಾಣ ಬೀಳುವ ಸಾಧ್ಯತೆ. ಕನಸಿನ ಲೋಕದಿಂದ ಹೊರಬಂದು ವ್ಯವಹರಿಸುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆ.
ವೃಶ್ಚಿಕ
ಎಲ್ಲಾ ರೀತಿಯ ಅನುಕೂಲತೆಗಳು ದೊರಕಿ ಮಾನಸಿಕ ಸಮಾಧಾನ ಹೊಂದುವಿರಿ. ಧಾರ್ಮಿಕ ಕೆಲಸ–ಕಾರ್ಯಗಳೆಡೆಗೆ ಮನಸ್ಸನ್ನು ಕೇಂದ್ರೀಕರಿಸಲಿದ್ದೀರಿ. ಕೌಟುಂಬಿಕ ಸಮಸ್ಯೆಗಳೆಲ್ಲವೂ ದೂರವಾಗಲಿವೆ.
ಧನು
ಸಂಬಂಧಿಕರಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ಸಲುವಾಗಿ ಶ್ರಮ ವಹಿಸಲಿದ್ದೀರಿ. ಅನುನಯದ ನಡೆಯಿಂದಾಗಿ ಕಾರ್ಯಸಿದ್ಧಿ. ಹೊಸ ವಿಷಯದ ಬಗೆಗೆ ಆಪ್ತರೊಡನೆ ಚಿಂತನೆ ನಡೆಸಲಿದ್ದೀರಿ.
ಮಕರ
ನಿಮ್ಮ ಪ್ರಯತ್ನದೊಂದಿಗೆ ಇತರರ ಸಹಾಯವೂ ದೊರಕುವುದರಿಂದಾಗಿ ಕೆಲಸ–ಕಾರ್ಯಗಳು ಚುರುಕುಗೊಳ್ಳಲಿವೆ. ಕಾರ್ಯನಿರ್ವಹಣೆ ವಿಷಯದಲ್ಲಿ ದೃಢನಿರ್ಧಾರವನ್ನು ತಳೆಯಲಿದ್ದೀರಿ.
ಕುಂಭ
ಸಣ್ಣ ವಿಷಯದ ಬಗೆಗೂ ಹೆಚ್ಚಿನ ಗಮನ ವಹಿಸಿ ಕಾರ್ಯ ನಿರ್ವಹಿಸುವಿರಿ. ಮನೆಯವರೊಂದಿಗಿನ ತಾರತಮ್ಯವು ದೂರವಾಗಿ ಸಂತಸ ಮೂಡಿಬರಲಿದೆ. ಬುದ್ಧಿವಂತಿಕೆಯಿಂದ ಕೆಲಸ ನಿಭಾಯಿಸಲಿದ್ದೀರಿ.
ಮೀನ
ಕೈಗೊಂಡ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಪೂರ್ಣಗೊಳ್ಳಲಿದೆ. ಮಾನಸಿಕ ಚಿಂತೆಗಳು ದೂರವಾಗಿ ಆತ್ಮವಿಶ್ವಾಸವನ್ನು ಹೊಂದುವಿರಿ. ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ.