
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ
ಸೋಮವಾರ, ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:40 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28
ಮೇಷ
ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದಿರುವುದು ಒಳ್ಳೆಯದು. ಪ್ರತಿಭಾವಂತರಿಗೆ ವಿಫುಲ ಅವಕಾಶಗಳು ಕೂಡಿಬರಲಿವೆ. ಆಭರಣಾದಿ ಬೆಲೆಬಾಳುವ ವಸ್ತುಗಳ ಖರೀದಿ ಯೋಗ.
ವೃಷಭ
ವ್ಯವಹಾರದಲ್ಲಿ ನಿಪುಣತೆಯನ್ನು ಮೆರೆಯಲಿದ್ದೀರಿ. ಅಧಿಕಾರಿಗಳಿಂದ ಮಾನಸಿಕ ಹಿಂಸೆ ಸಂಭವ. ಆಧ್ಯಾತ್ಮಿಕ ಒಲವಿನಿಂದಾಗಿ ಸಮಾಧಾನ. ಆತ್ಮೀಯರಿಂದ ಸಮಸ್ಯೆಗಳಿಗೆ ಪರಿಹಾರ. ಮಹಿಳೆಯರಿಗೆ ತಾಳ್ಮೆ ಅಗತ್ಯ.
ಮಿಥುನ
ಹೊಸ ಉದ್ಯಮವೊಂದರ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ. ವಿದ್ಯುತ್, ಬೆಂಕಿ ಮುಂತಾದವುಗಳ ವಿಷಯದಲ್ಲಿ ಜಾಗೃತೆ ಅಗತ್ಯ. ಲಲಿತ ಕಲೆಗಳಲ್ಲಿ ತೊಡಗಿಕೊಂಡವರಿಗೆ ಲಾಭ. ಮಕ್ಕಳಿಂದ ನೆಮ್ಮದಿ.
ಕಟಕ
ದೈನಂದಿನ ಕೆಲಸ–ಕಾರ್ಯಗಳಲ್ಲಿ ಆಸಕ್ತಿ ಮೂಡುವುದು. ತಲೆದೋರಿರುವ ವಿವಾದಗಳಿಗೆ ಮುಕ್ತಿ ದೊರಕುವ ಸಾಧ್ಯತೆ. ದೂರದ ಪ್ರಯಾಣದ ಅನಿವಾರ್ಯತೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಸಿಂಹ
ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ, ಶುಭ ಲಾಭಗಳು ಕಂಡುಬರುವವು. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆ. ರಾಜಕೀಯ ಜೀವನದಲ್ಲಿ ಸಂತೃಪ್ತಿ. ದೇವತಾರಾಧನೆಯಿಂದ ನೆಮ್ಮದಿ. ವ್ಯಾಪಾರದಲ್ಲಿ ಪ್ರಗತಿ.
ಕನ್ಯಾ
ವ್ಯವಹಾರದ ವಿಷಯದಲ್ಲಿ ಮಹತ್ತರ ನಿರ್ಣಯವೊಂದನ್ನು ತೆಗೆದುಕೊಳ್ಳಲಿದ್ದೀರಿ. ಮಾತೃವರ್ಗದವರಿಂದ ಸಾಂತ್ವನ ದೊರೆತು ನೆಮ್ಮದಿ. ಆಂತರಿಕ ಸಮಸ್ಯೆಗಳಿಂದ ಮುಕ್ತಿ. ಅಮೂಲ್ಯ ವಸ್ತುಗಳ ಸಂಗ್ರಹದ ಸಾಧ್ಯತೆ.
ತುಲಾ
ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ವ್ಯವಹಾರದಲ್ಲಿ ಪ್ರಗತಿ. ಹಿರಿಯರ ಆರೋಗ್ಯದ ಬಗ್ಗೆ ಖರ್ಚು. ಪುಣ್ಯಕ್ಷೇತ್ರ ದರ್ಶನ ಭಾಗ್ಯ. ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತವಾಗಲಿದೆ.
ವೃಶ್ಚಿಕ
ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಆದಾಯದಲ್ಲಿ ಕಡಿತ. ಆರ್ಥಿಕ ಸಂಪನ್ಮೂಲಗಳ ವೃದ್ಧಿ. ನಿರೀಕ್ಷಿಸಿದ ವ್ಯಕ್ತಿಗಳಿಂದ ಸಹಕಾರ ಲಭ್ಯವಾಗುವುದು. ಹಿತಶತ್ರುಗಳಿಂದ ಮೋಸಹೋಗುವ ಸಾಧ್ಯತೆ.
ಧನು
ಹೊಸ ಆಸ್ತಿ, ಮನೆಯನ್ನು ಖರೀದಿಸುವ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ನಿಷ್ಠೆಯಿಂದಾಗಿ ಪ್ರೋತ್ಸಾಹ ಪ್ರಶಂಸೆ ಸಿಗಲಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರಕುವ ದಿನ. ಪತ್ರ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ.
ಮಕರ
ಅನಾವಶ್ಯಕ ವಿವಾದಗಳಿಂದ ದೂರ ಇರುವುದು ಉತ್ತಮ. ಆರೋಗ್ಯದಲ್ಲಿ ಪ್ರಗತಿ. ರಾಜಕೀಯ ವ್ಯಕ್ತಿಗಳು ಶುಭ ಸಮಾಚಾರ ಕೇಳಲಿದ್ದೀರಿ. ಆಲಸ್ಯದಿಂದಾಗಿ ಕೆಲಸಗಳಲ್ಲಿ ಹಿನ್ನೆಡೆ ಸಾಧ್ಯತೆ.
ಕುಂಭ
ಯೋಜಿತ ಕಾರ್ಯಗಳಲ್ಲಿ ಯಶಸ್ಸು. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ದಾಯಾದಿಗಳೊಂದಿಗಿನ ಹೊಂದಾಣಿಕೆಯಿಂದ ಆಸ್ತಿ ತಗಾದೆಗಳು ತೀರ್ಮಾನವಾಗಲಿವೆ. ಆರೋಗ್ಯದ ಬಗ್ಗೆ ನಿಗಾ ಅಗತ್ಯ.
ಮೀನ
ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಮತ್ತೊಮ್ಮೆ ಯೋಚಿಸುವುದು ಉತ್ತಮ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಋಣಬಾಧೆಯಿಂದ ಮುಕ್ತಿ ದೊರಕುವ ಸಾಧ್ಯತೆ. ತಾಯಿಯಿಂದ ಸಹಕಾರ.