Design a site like this with WordPress.com
Get started

ಜುಲೈ 10, 2020 ;ಶುಕ್ರವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಬೆಳಗ್ಗೆ 11:39 ನಂತರ ಷಷ್ಠಿ ತಿಥಿ,
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:52 ರಿಂದ 12:32
ಗುಳಿಕಕಾಲ: ಬೆಳಗ್ಗೆ 7:40 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:16

ಮೇಷ

ಅನಿವಾರ್ಯ ಒತ್ತಡಕ್ಕೆ ಒಳಗಾಗಿ ಎಲ್ಲವನ್ನು ತಾಳಿಕೊಳ್ಳಬೇಕಾದೀತು. ಒಳ್ಳೆಯ ಯೋಜನೆಯೊಂದಕ್ಕೆ ಮುನ್ನುಡಿ ಹಾಡುವ ಸಾಧ್ಯತೆ. ವಿಶ್ವಾಸ, ಪ್ರೀತಿಪಾತ್ರ ನಡೆಗಳಿಂದಾಗಿ ಎಲ್ಲರಲ್ಲೂ ಪ್ರಶಂಸೆಗೆ ಪಾತ್ರರಾಗುವಿರಿ.

ವೃಷಭ

ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚುವ ಸಾಧ್ಯತೆ. ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಭಾವನೆಗಳಿಗೆ ಮನ್ನಣೆ ನೀಡಿ ಗೌರವ ಸಂಪಾದನೆ.

ಮಿಥುನ

ಸ್ವತಂತ್ರ ನಿರ್ಧಾರ ಕೈಗೊಳ್ಳುವಲ್ಲಿ ಹಿಂಜರಿಕೆ ಬೇಡ. ಸಮತೋಲನ ಕಾಯ್ದುಕೊಳ್ಳುವ ಚಾಣಾಕ್ಷತೆಯಿಂದಾಗಿ ಮಾನಸಿಕ ನೆಮ್ಮದಿ. ಸ್ನೇಹಿತರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಕಟಕ

ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ದಿಟ್ಟ ಸಾಮರ್ಥ್ಯ ನಿಮ್ಮದು. ಯಾವುದೇ ವಿಚಾರದಲ್ಲಿ ರಾಜಿಯಾಗದ ಮನಸ್ಥಿತಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆಯ ಬಲ.

ಸಿಂಹ

ಕಾರ್ಯಯೋಜನೆಯ ಯಶಸ್ಸಿಗಾಗಿ ಅನೇಕ ಸಲಹೆಗಳು ಬಂದರೂ ಸ್ವಯಂ ತುಲನೆ ಮಾಡಿ ನಿರ್ಧಾರಕ್ಕೆ ಬರುವುದು ಒಳ್ಳೆಯದು. ಜನಪ್ರತಿನಿಧಿಗಳಿಗೆ ದೂರದ ಪ್ರಯಾಣ ಶ್ರೇಯಸ್ಕರವಲ್ಲ. ಉದ್ಯೋಗದಲ್ಲಿ ಅಡೆತಡೆ.

ಕನ್ಯಾ

ಕುಟುಂಬದ ಸದಸ್ಯರೊಂದಿಗೆ ಸಂತಸದ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಬಡ್ತಿ. ಶಿಸ್ತಿನ ನಡವಳಿಕೆ ಪಾಲಿಸಿ. ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯಲಿದೆ. ಸಂಬಂಧಿಗಳ ದರ್ಶನ ಸಾಧ್ಯತೆ.

ತುಲಾ

ತೊಂದರೆ ಎದುರಾದರೂ ಹೆಚ್ಚು ಕೆಲಸ ಮಾಡುವ ಸ್ಥೈರ್ಯ. ಬುದ್ಧಿವಂತಿಕೆಯಿಂದ ಸಾಧನೆ ಮಾಡುವಿರಿ. ಗೌರವಾದರಗಳು ಲಭಿಸಲಿವೆ. ದೇವಿಯ ದರ್ಶನ ಯೋಗ ಕಂಡುಬರುವುದು. ಮಾನಸಿಕ ಶಾಂತಿ ಲಭಿಸಲಿದೆ.

ವೃಶ್ಚಿಕ

ನಿಮ್ಮ ಸಾಹಸೀ ಪ್ರವೃತ್ತಿಯೇ ನಿಮಗೊಂದು ವೃತ್ತಿಯಾಗಿ ಮಾರ್ಪಾಡಾಗುವ ಸಾಧ್ಯತೆ. ಕಳಕಳಿ ಹೊಂದಿದವರಿಂದ ಉಚಿತವಾದ ಸಲಹೆ, ಸಹಕಾರ ದೊರೆತು ಶುಭ ಲಾಭಗಳನ್ನು ತಂದುಕೊಡಲಿವೆ.

ಧನು

ನಿಮ್ಮ ಗುರಿಸಾಧನೆಯಲ್ಲಿ ಪ್ರಗತಿ ಸಾಧಿಸುವಿರಿ. ಅಂದುಕೊಂಡ ಕಾರ್ಯ ಸಾಧನೆಗಾಗಿ ಸಮರ್ಥ ಮಾರ್ಗ ಗೋಚರವಾಗಲಿದೆ. ಸಹೋದ್ಯೋಗಿಗಳಿಂದ ಸ್ವಲ್ಪಮಟ್ಟಿನ ವಿರೋಧ ವ್ಯಕ್ತವಾಗಬಹುದು. ಸಮಚಿತ್ತ ಕಾಯ್ದುಕೊಳ್ಳಿ.

ಮಕರ

ನಿಮ್ಮ ಮಹತ್ತರವಾದ ಕನಸುಗಳನ್ನು ಕೈಬಿಡುವಂತೆ ಬಂಧುಗಳಿಂದ ಸಲಹೆಗಳು ಬರುವ ಸಾಧ್ಯತೆ. ನಿಮ್ಮ ದಿಟ್ಟ ನಿಲುವಿನಿಂದ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಯಾವುದೇ ಕೆಲಸಕ್ಕೂ ದುಡಕದೇ ಮತ್ತೊಮ್ಮೆ ಯೋಚಿಸಿ.

ಕುಂಭ

ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಮುಗಿಸುವ ತವಕದಿಂದಾಗಿ ಗೊಂದಲ ಉಂಟಾಗಬಹುದು. ದುಂದುವೆಚ್ಚವನ್ನು ಭರಿಸಬೇಕಾಗಬಹುದು. ಕಾರ್ಯಯೋಜನೆಯಿಂದ ವೆಚ್ಚ ಕಡಿತಗೊಳಿಸುವ ಸಾಧ್ಯತೆ.

ಮೀನ

ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣತ ವ್ಯಕ್ತಿಗಳೊಂದಿಗೆ ಸಮಾಲೋಚನೆಯ ಸಾಧ್ಯತೆ. ಸರಿಯಾದ ನಿರ್ಧಾರದಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ನಿಶೆ ಏರಿಸುವ ವಸ್ತುಗಳಿಂದ ದಿನದ ಮಟ್ಟಿಗೆ ದೂರವಿರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: