
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ,
ಬೆಳಗ್ಗೆ 10:12 ನಂತರ ಪಂಚಮಿ ತಿಥಿ,
ಗುರುವಾರ, ಶತಭಿಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40
ಮೇಷ
ಆತ್ಮೀಯತೆಯಿಂದಾಗಿ ಶುಭ ಸಂದರ್ಭಗಳು ನಿರ್ಮಾಣವಾಗಲಿವೆ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು.
ವೃಷಭ
ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.
ಮಿಥುನ
ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗಲಿವೆ. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.
ಕಟಕ
ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.
ಸಿಂಹ
ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು ದೊರೆಯಲಿವೆ. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.
ಕನ್ಯಾ
ಭಿನ್ನಾಭಿಪ್ರಾಯದಿಂದಾಗಿ ನಿಂತುಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಲಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ–ಕಾರ್ಯಗಳಲ್ಲಿ ಹುಮ್ಮಸ್ಸು.
ತುಲಾ
ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡು ಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.
ವೃಶ್ಚಿಕ
ಕೆಲಸ–ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.
ಧನು
ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರವಿರಲಿದ್ದೀರಿ. ಗೆಳೆಯರಿಂದ ನೆಮ್ಮದಿ.
ಮಕರ
ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ–ಕಾರ್ಯಗಳು ಕೂಡಿಬರುವವು.
ಕುಂಭ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.
ಮೀನ
ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.