
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಮಾಘ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:27 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:15
ಮೇಷ
ಕಚೇರಿ ಕೆಲಸಗಳಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಬರಹಗಾರರು, ಮುದ್ರಣಕಾರರಿಗೆ ಹೆಚ್ಚಿನ ಅವಕಾಶಗಳು ಒದಗಿ ಬರಲಿವೆ. ಹೊಸ ಗೆಳೆಯರ ಪರಿಚಯದೊಂದಿಗೆ ಹೊಸತನ ಮೂಡಲಿದೆ.
ವೃಷಭ
ಮನೆಯವರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಲಿದ್ದೀರಿ. ನಿಮ್ಮ ಅನಿಸಿಕೆಗಳಿಗೆ ಗಮನ ಕೊಟ್ಟು ಕಾರ್ಯ ನಿರ್ವಹಿಸಿದಲ್ಲಿ ವೈಯಕ್ತಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.
ಮಿಥುನ
ವ್ಯಾಪಾರಗಳಲ್ಲಿ ಉತ್ತಮ ಲಾಭದ ನಿರೀಕ್ಷೆ. ಮನಃಶಾಂತಿಗಾಗಿ ದೇವಸ್ಥಾನ ಅಥವಾ ಪ್ರವಚನ ಮಂದಿರಗಳಿಗೆ ಭೇಟಿ ನೀಡಲಿದ್ದೀರಿ. ಪರಿವರ್ತನೆಗಳಿಗಾಗಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ.
ಕಟಕ
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಳ್ಳಲಿದೆ. ಜೀವನದಲ್ಲಿದ್ದ ನಿರುತ್ಸಾಹ ದೂರವಾಗುವುದು. ದುಡಿಮೆಯ ಹೆಚ್ಚಿನ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ಸಿಂಹ
ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಸಾಧ್ಯತೆ. ಮೇಲಧಿಕಾರಿಗಳಿಂದ ಪ್ರಶಂಸೆ. ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿನ ಕೆಲಸಗಳು ನೆರವೇರುವವು. ಸಂಸಾರದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಲಿವೆ.
ಕನ್ಯಾ
ನಿತ್ಯದ ಕಾರ್ಯಕ್ರಮಗಳಿಂದ ಬದಲಾವಣೆ ಕಾಣಲಿರುವಿರಿ. ಕೆಲಸದವರಿಗೆ ವ್ಯವಹಾರವನ್ನು ಮನವರಿಕೆ ಮಾಡಿಕೊಡುವುದರಿಂದ ಯಶಸ್ಸನ್ನು ಸಾಧಿಸಲಿದ್ದೀರಿ. ಅಧ್ಯಾಪಕ ವರ್ಗದವರು ಹೆಸರು ಗಳಿಸಲಿದ್ದೀರಿ.
ತುಲಾ
ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ದಾಯಾದಿಗಳಲ್ಲಿನ ಭಿನ್ನಾಭಿಪ್ರಾಯಗಳು ಮಿತ್ರರ ಮೂಲಕ ಬಗೆಹರಿಯುವುದು. ನೇರವಾದ ಮಾತುಗಳು ಪ್ರಮುಖ ಎನಿಸುವುದು. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನೆಡೆ.
ವೃಶ್ಚಿಕ
ಬಂಧು ಬಳಗದವರ ಸಹಕಾರದಿಂದ ಎಲ್ಲಾ ಕೆಲಸಗಳು ಸರಾಗವಾಗಿ ಮುಗಿದು ಮನಸ್ಸಿಗೆ ಉಲ್ಲಾಸ ಮತ್ತು ನೆಮ್ಮದಿಯನ್ನು ಹೊಂದುವಿರಿ. ಮಕ್ಕಳ ಅಭಿಲಾಷೆ ಈಡೇರಿಸುವ ಸಲುವಾಗಿ ವೆಚ್ಚ ಭರಿಸಬೇಕಾದೀತು.
ಧನು
ಹೊಸ ಉದ್ಯೋಗದ ಬಗ್ಗೆ ಚಿಂತನೆಯಲ್ಲಿ ಯಶಸ್ಸು. ಹೆಂಚು, ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅತಿಯಾದ ಆತ್ಮವಿಶ್ವಾಸ ಸಲ್ಲದು.
ಮಕರ
ಹೊಸ ಉದ್ಯಮದ ಬಗೆಗಿನ ನಿಮ್ಮ ಆಶಾವಾದಕ್ಕೆ ಪುಷ್ಟಿ ದೊರೆಯಲಿದೆ. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ವಾಹನಾದಿಗಳ ಖರೀದಿಯನ್ನು ಮಾಡುವ ಸಾಧ್ಯತೆ.
ಕುಂಭ
ಹಿಂದಿನ ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗವೊಂದು ಗೋಚರಿಸಲಿದೆ. ಸ್ನೇಹಿತರ ಸಹಕಾರದಿಂದಾಗಿ ವ್ಯವಹಾರವನ್ನು ಉತ್ತಮ ಸ್ಥಿತಿಗೆ ಒಯ್ಯಲಿದ್ದೀರಿ. ದೂರದ ಪ್ರಯಾಣ ಮಾಡಿದಿರಿ.
ಮೀನ
ಹಣಕಾಸಿನ ವಿಚಾರದಲ್ಲಿ ಚೇತರಿಕೆ. ಮನೆ ಕಟ್ಟುವ ವಿಷಯವಾಗಿ ಮನೆಯವರೊಂದಿಗೆ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ಸು. ಮಾತೃವರ್ಗದವರಲ್ಲಿ ಆರೋಗ್ಯದ ಸಮಸ್ಯೆ ಉಂಟಾದೀತು.