
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ
ರಾಹುಕಾಲ: ಸಂಜೆ 5:14 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:14
ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 2:02
ಮೇಷ
ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ. ಕೆಲ ವಿಷಯಗಳ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಿ.
ವೃಷಭ
ಹೊಸಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪರೇಷೆಗಳನ್ನು ರಚಿಸಲು ಉತ್ತಮ ಕಾಲ. ಕೈಗೊಂಡ ಕಾರ್ಯಗಳು ನೆರವೇರುವ ಅವಕಾಶ ವೃದ್ಧಿ.
ಮಿಥುನ
ಗುರಿ ಸಾಧನೆಗಾಗಿ ತಾಳ್ಮೆ ವಹಿಸುವುದು ಉತ್ತಮ. ವೃತ್ತಿ ಜೀವನದಲ್ಲಿನ ತೊಡಕಿನ ನಿವಾರಣೆಗಾಗಿ ಸಹಾಯ ಪಡೆಯುವ ಸಾಧ್ಯತೆ. ತೊಡಕಿನ ನಿವಾರಣೆಗಾಗಿ ಯೋಗ್ಯ ನಿರ್ಣಯ ಕೈಗೊಳ್ಳುವ ಸಾಧ್ಯತೆ. ಸಹಧರ್ಮಿಣಿಯಿಂದ ಸಕಾಲಿಕ ನೆರವು.
ಕಟಕ
ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ದುಡುಕುತನದಿಂದಾಗಿ ಕಾರ್ಯಗಳು ಕೆಟ್ಟುಹೋಗುವ ಸಾಧ್ಯತೆ.
ಸಿಂಹ
ಚುರುಕಿನಿಂದ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಗಳಿಸುವಿರಿ. ಉದಾಸೀನತೆ ಯಾವುದೇ ಕಾರಣಕ್ಕೂ ಸಲ್ಲದು. ಸಕಾಲದಲ್ಲಿ ಆದಾಯದಲ್ಲಿ ವೃದ್ಧಿಯಾಗಿ ತೃಪ್ತಿಯ ಹಿತಾನುಭವ ಅನುಭವಿಸುವಿರಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ.
ಕನ್ಯಾ
ಹುಚ್ಚು ಓಟದಿಂದ ಕೂಡಿದ ವ್ಯಾಪಾರ ವ್ಯವಹಾರಗಳು ಒಂದು ಹಂತಕ್ಕೆ ಬರಲಿವೆ. ಜವಾಬ್ದಾರಿಯ ಸ್ಥಾನವೊಂದನ್ನು ಅಲಂಕರಿಸಬೇಕಾದೀತು. ಆತ್ಮವಿಶ್ವಾಸದಿಂದಾಗಿ ಜೀವನದ ದಿಕ್ಕು ಬದಲಾವಣೆ. ಸಹೋದ್ಯೋಗಿಗಳಿಂದ ಹೆಚ್ಚಿನ ಪ್ರೀತಿಯ ಸಹಕಾರ ದೊರೆಯಲಿದೆ.
ತುಲಾ
ಇಚ್ಛಾಶಕ್ತಿಯ ಬಲದಿಂದಾಗಿ ಕೈಗೊಂಡ ಯೋಜನೆಗಳು ಉತ್ತಮ ಹಂತವನ್ನು ತಲುಪಿ ಹೆಚ್ಚಿನ ಸಮಾಧಾನ ದೊರೆಯಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ವೃದ್ಧಿ. ಸೂರ್ಯನ ಆರಾಧನೆಯಿಂದ ಹೆಚ್ಚಿನ ಯಶಸ್ಸು.
ವೃಶ್ಚಿಕ
ಅತ್ಯಂತ ಶುಭದಿನವಾಗಿದ್ದು, ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಹಿಂಜರಿಕೆಯಿಲ್ಲದೆ ಮುನ್ನಡೆ ಅನುಭವಿಸುವಿರಿ. ಮೃದುವಾದ ಮಾತುಗಳ ಮೂಲಕ ಮುಕ್ತ ಚರ್ಚೆಗಳಲ್ಲಿ ಭಾಗವಹಿಸುವಿರಿ. ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಮುನ್ನಡೆ.
ಧನು
ಜಾಣ್ಮೆಯಿಂದ ಕಷ್ಟಸಾಧ್ಯವಾದುದರ ಸಾಧನೆ. ಅಧಿಕಾರ ಪ್ರಾಪ್ತಿಯ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ ತೃಪ್ತಿ ಹೊಂದುವಿರಿ. ಆಸೆ ಆಕಾಂಕ್ಷೆಗಳು ನೆರವೇರಿದ ಸಂಭ್ರಮ. ಮನೆಯಲ್ಲಿ ಸಂತೋಷದ ವಾತಾವರಣ
ಮಕರ
ಕೆಲಸ ಕಾರ್ಯಗಳಲ್ಲಿ ಒತ್ತಡ ವಿಲ್ಲದ ನಿರಾಳತೆ. ಸಹೋದ್ಯೋಗಿಗಳ ಇಚ್ಛೆ ಪೂರೈಕೆಗಾಗಿ ಶಕ್ತಿಮೀರಿ ಶ್ರಮ ವಹಿಸುವಿರಿ. ರೈತಾಪಿ ವರ್ಗದವರಿಗೆ ಪರಿಸರ ವ್ಯತ್ಯಯದಿಂದಾಗಿ ಸ್ವಲ್ಪಮಟ್ಟಿನ ಆತಂಕ ಸೃಷ್ಟಿಯಾಗುವುದು.
ಕುಂಭ
ವಿರೋಧಿಗಳ ಸಂಚು ಫಲಿಸದು. ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ಇಮ್ಮಡಿ ಉತ್ಸಾಹದಿಂದ ಮುನ್ನುಗ್ಗಿ. ನಿರಾಶರಾಗದೆ ಆಶಾವಾದ ಬೆಳೆಸಿಕೊಳ್ಳುವುದು ಉತ್ತಮ. ಹಿರಿಯರ ಹಿತವಚನಗಳನ್ನು ಗೌರವಿಸಿ.
ಮೀನ
ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡು ಬರಬಹುದು. ಆಸೆಪಟ್ಟು ನಿರ್ವಹಿಸಿದ ಕೆಲಸಕಾರ್ಯಗಳು ಸುಗಮವಾಗಿ ನೆರವೇರುವುದು. ಅನಗತ್ಯ ಭಯದಿಂದ ಮುಕ್ತರಾಗಿ ನಿರಾಳತೆ ಕಂಡುಬರುವುದು. ಹನುಮನ ಆರಾಧನೆ ಸೂಕ್ತ.